ಗಡಿಯಲ್ಲಿ ಯುದ್ಧ ಮಾಡುವುದೇ ನಿಜವಾದ ಯುದ್ಧ – ಪಾಕ್ ಕುತಂತ್ರದ ಬಗ್ಗೆ ಹೆಗ್ಗಡೆ ಮಾತು

Public TV
1 Min Read

ಧಾರವಾಡ: ಪಾಕಿಸ್ತಾನ ಯುದ್ಧ ಮಾಡುವುದಾದರೆ ಗಡಿಯಲ್ಲಿ ಯುದ್ಧ ಘೋಷಣೆ ಮಾಡಲಿ. ಆಗ ಶಕ್ತಿಯ ಪ್ರದರ್ಶನವಾಗುತ್ತದೆ. ಗಡಿಯಲ್ಲಿ ಯುದ್ಧ ಮಾಡುವುದು ನಿಜವಾದ ಯುದ್ಧ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಡಿಯಲ್ಲಿ ಯುದ್ಧ ಮಾಡುವುದು ನಿಜವಾದ ಯುದ್ಧ. ಆದ್ರೆ ಈಗ ನಡೆಯುತ್ತಿರುವುದು ಆಂತರಿಕ ಯುದ್ಧ, ಇದು ಸಿವಿಲ್ ವಾರ್. ಈ ಪರಿಸ್ಥಿತಿಯಲ್ಲಿ ಸಿವಿಲ್ ವಾರ್ ತುಂಬಾ ಕಷ್ಟ. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ನಾವು ಕಾಶ್ಮೀರದಲ್ಲಿ ಪ್ರಜೆಗಳೊಂದಿಗೆ ಹೋರಾಟ ಮಾಡಬೇಕಾಗಿದೆ. ಅಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ. ಒಳಗಡೆ ತುಂಬಾ ಬೆಂಕಿ ಇದೆ. ನಮ್ಮ ಸೈನಿಕರಿಗೆ ಶತ್ರುಗಳನ್ನ ಗುರುತಿಸುವುದು ಕಷ್ಟವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರು ಕೂಡ ಸೈನಿಕರಿಗೆ ಕಲ್ಲು ಹೊಡೆಯುತ್ತಾರೆ. ಆದ್ರೆ ಈ ತಪ್ಪಿಗೆ ಮಹಿಳೆಯರು ಮತ್ತು ಮಕ್ಕಳನ್ನು ಶಿಕ್ಷಿಸುವಂತಿಲ್ಲ. ಪಾಕಿಸ್ತಾನದವರು ಯುದ್ಧ ಮಾಡುವುದಿದ್ದರೆ ಗಡಿಯಲ್ಲಿ ಮಾಡಲಿ, ಆಗ ನಮ್ಮ ಮತ್ತು ಅವರ ಶಕ್ತಿ ನಿರ್ಧಾರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಕಿಸ್ತಾನಕ್ಕೆ ಶಾಂತಿ ಬೇಕಾಗಿದೆ ಎಂದರೆ ಸಣ್ಣ ಸಣ್ಣದಾಗಿ ಚಿವುಟುವ ಕೆಲಸವನ್ನು ತಕ್ಷಣ ನಿಲ್ಲಿಸಲಿ. ಇಲ್ಲವೇ ರಾಜತಾಂತ್ರಿಕವಾಗಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ. ಯುದ್ಧ ಬೇಡವೆಂದಾದರೆ ದೇಶದ ಶಾಂತಿ ಕದಡುವ ಭಯೋತ್ಪಾದನೆಯನ್ನು ಬಿಡಲಿ. ಉಗ್ರರು ಯಾವುದೇ ತಪ್ಪು ಮಾಡದ ಭಾರತೀಯ ಅಮಾಯಕ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಇದರಿಂದ ದೇಶವೇ ಒಗ್ಗಟ್ಟಾಗಿದೆ, ಎಲ್ಲರ ರಕ್ತ ಕುದಿಯುತ್ತಿದೆ. ಆದರೆ ರಾಜತಾಂತ್ರಿಕವಾಗಿ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವೇ ಯುದ್ಧವನ್ನೇ ಘೋಷಣೆ ಮಾಡಿ. ಎರಡು ಬಿಟ್ಟು ದೇಶದ ಜನರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಮಾಡಬೇಡಿ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *