ರಾಜ್ಯದಲ್ಲಿ 423 ಆಸ್ತಿಗೆ ವಕ್ಫ್‌ ನೋಟಿಸ್‌ – ಯಾವ ಜಿಲ್ಲೆಯಲ್ಲಿ ನೋಟಿಸ್‌ ಹಿಂದಕ್ಕೆ ಪಡೆಯಲಾಗಿದೆ?

Public TV
1 Min Read

– ಕಂದಾಯ ಇಲಾಖೆಯಿಂದ ಅಧಿಕೃತ ವಿವರ ಪ್ರಕಟ

ಬೆಂಗಳೂರು: ಉಪಚುನಾವಣೆ ಸಮಯದಲ್ಲಿ ವಕ್ಫ್‌ ಆಸ್ತಿ (Waqf Property) ವಿವಾದ ಜೋರಾಗುತ್ತಿದ್ದಂತೆ ಸರ್ಕಾರ ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ. ಕೆಲ ರೈತರಿಗೆ (Farmers) ನೀಡಿದ್ದ ನೋಟಿಸ್‌ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಈ ಸಂಬಂಧ ಕಂದಾಯ ಇಲಾಖೆ (Revenue Department) ಕಾಂಗ್ರೆಸ್‌ ಸರ್ಕಾರ ಅಧಿಕಾರ ಸ್ವೀಕರಿಸಿದ ದಿನದಿಂದ ಹಿಡಿದು ಇಲ್ಲಿಯವರೆಗಿನ ಜಿಲ್ಲಾವಾರು ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಜೂನ್‌ 01, 2023 ರಿಂದ ಹಿಡಿದು ಈ ವರ್ಷದ ಅಕ್ಟೋಬರ್‌ 31 ರ ಅವಧಿವರೆಗೆ ಐದು ಜಿಲ್ಲೆಯ ಒಟ್ಟು 423  ಆಸ್ತಿಗೆ  ನೋಟಿಸ್‌ ನೀಡಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸರ್‌ ಎಂ.ವಿಶ್ವೇಶ್ವರಯ್ಯ ಓದಿದ್ದ ಸರ್ಕಾರಿ ಶಾಲೆಯೂ ವಕ್ಫ್‌ ಹೆಸರಿಗೆ

31 ಜಿಲ್ಲೆಗಳ ಪೈಕಿ ಬೆಳಗಾವಿ 4, ಕಲಬುರಗಿ 166, ವಿಜಯನಗರ 14, ವಿಜಯಪುರ 120, ಯಾದಗಿರಿ 119 ಸೇರಿದಂತೆ ಒಟ್ಟು 423 ಆಸ್ತಿಗಳಿಗೆ  ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಾಗಲಕೋಟೆ| 2 ಹಿಂದೂ ಸ್ಮಶಾನ ಈಗ ವಕ್ಫ್‌ ಆಸ್ತಿ!

ಈ ಪೈಕಿ ಬೆಳಗಾವಿಯ 4 ಆಸ್ತಿಗೆ ನೀಡಿದ್ದ ನೋಟಿಸ್‌ ಹಿಂಪಡೆಯಲಾಗಿದೆ. ಕಲಬುರಗಿ, ವಿಜಯನಗರ, ವಿಜಯಪುರಲ್ಲಿ ನೋಟಿಸ್‌ ಹಿಂದಕ್ಕೆ ಪಡೆಯಲು ಕ್ರಮವಹಿಸಲಾಗಿದೆ.

ಯಾದಗಿರಿಯ 119  ನೋಟಿಸ್‌ ಪೈಕಿ 30 ನೋಟಿಸ್‌ ಅನ್ನು ಅಕ್ಟೋಬರ್‌ 25 ರಂದು ಹಿಂದಕ್ಕೆ ಪಡೆಯಲಾಗಿದೆ. 61 ಪ್ರಕರಣಗಳಿಗೆ ಕೋರ್ಟ್‌ ತಡೆಯಾಜ್ಞೆ ಇದೆ. 28 ಪ್ರಕರಣಗಳಲ್ಲಿ ನೋಟಿಸ್‌ ನೀಡಿದವರಿಗೂ ಮತ್ತು ಪಹಣಿಯಲ್ಲಿರುವ ಹೆಸರಿಗೂ ವ್ಯತ್ಯಾಸ ಇರುವುದಿಂದ ಜಾರಿಯಾಗಿಲ್ಲ ಎಂದು ತಿಳಿಸಿದೆ.

 

Share This Article