ದೇವಸ್ಥಾನದಲ್ಲಿ ಪ್ರಸಾದ ಹಂಚಲು ಕೊಹ್ಲಿ ಯಾವಾಗ ಹೋದ್ರು?- ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ವೀಡಿಯೋ

Public TV
1 Min Read

ಭುವನೇಶ್ವರ್:‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಆರ್‌ಸಿಬಿ ಫೈನಲ್‌ಗೆ ಲಗ್ಗೆಯಿಟ್ಟ ಬಳಿಕ ವಿರಾಟ್‌ ಕೊಹ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಒಡಿಶಾ ದೇವಸ್ಥಾನದಲ್ಲಿ ವಿರಾಟ್‌ ಕೊಹ್ಲಿ (Virat Kohli) ಪ್ರಸಾದ ಹಂಚುತ್ತಿರುವ ವೀಡಿಯೋವೊಂದು ಇಂಟರ್ನೆಟ್‌ಗೆ ಬೆಂಕಿ ಹಚ್ಚಿದೆ.

ಅರೇ..! ಕ್ರಿಕೆಟ್‌ ಆಡುವುದನ್ನು ಬಿಟ್ಟು ಕೊಹ್ಲಿ ಯಾವಾಗ ದೇವಸ್ಥಾನದಲ್ಲಿ ಪ್ರಸಾದ ಹಂಚಲು ಯಾವಾಗ ಹೋದ್ರು ಎಂದು ಅಭಿಮಾನಿಗಳು ಬೆರಗಾಗಿದ್ದಾರೆ. ಅಸಲಿಗೆ ಕೊಹ್ಲಿ ಪ್ರಸಾದ ಹಂಚುತ್ತಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದನ್ನೂ ಓದಿ: ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

ಅಸಲಿಗೆ ಇದು ಆರ್‌ಸಿಬಿ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅಲ್ಲ. ಅವರನ್ನೇ ಹೋಲುವ ಮತ್ತೊಬ್ಬ ವ್ಯಕ್ತಿ. ವಿರಾಟ್‌ ಕೊಹ್ಲಿಯ ತದ್ರೂಪಿ ವ್ಯಕ್ತಿ ಒಡಿಶಾ ದೇವಸ್ಥಾನದಲ್ಲಿ ಪ್ರಸಾದ ವಿತರಿಸುವ ಕೆಲಸ ಮಾಡಿಕೊಂಡಿದ್ದಾರೆ. ಈತನನ್ನು ನೋಡಿದರೆ, ಥೇಟ್‌ ಕೊಹ್ಲಿಯೇ ಎನ್ನುವಂತೆ ಕಾಣುತ್ತಾನೆ. ಈ ವ್ಯಕ್ತಿಯ ವೀಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು ಆಹಾರ ವ್ಲಾಗರ್‌ವೊಬ್ಬ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಪ್ರಸಾದ ವಿತರಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಆತ ಸಾಂಪ್ರದಾಯಿಕ ಧೋತಿ ಉಡುಗೆಯಲ್ಲಿದ್ದ ವ್ಯಕ್ತಿ ಕೊಹ್ಲಿಯನ್ನೇ ಹೋಲುವಂತಿದ್ದಾನೆ. ಆತ ಕೊಹ್ಲಿಯಂತೆಯೇ ಮೀಸೆ, ಗಡ್ಡ ಬಿಟ್ಟಿದ್ದಾನೆ. ಈತನನ್ನು ನೋಡಿ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ

ಈ ವೀಡಿಯೋಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್‌ ಮಾಡುತ್ತಿದ್ದಾರೆ. ‘ಹೌದಾ..! ಕೊಹ್ಲಿ ಯುಕೆಗೆ ಹೋಗಲಿಲ್ಲ, ಬದಲಾಗಿ ದೇವಾಲಯದಲ್ಲಿ ಸೇವೆ ಸಲ್ಲಿಸಲು ಶುರುಮಾಡಿದ್ದಾರೆ’ ಎಂದು ವ್ಯಕ್ತಿಯೊಬ್ಬ ಕಾಮೆಂಟ್‌ ಮಾಡಿದ್ದಾರೆ. ‘ಕೊಹ್ಲಿಯ ಅವಳಿ ಸಹೋದರನಂತೆ ಕಾಣುತ್ತಿದ್ದಾನೆ’ ಎಂದು ಮತ್ತೊಬ್ಬ ಕಾಮೆಂಟ್‌ ಮಾಡಿದ್ದಾರೆ.

Share This Article