ಪಂಚಾಯತ್‌ ಸಭೆಯಲ್ಲೇ ಅಧ್ಯಕ್ಷನ ಮೇಲೆ ಸದಸ್ಯನಿಂದ ಹಲ್ಲೆ

Public TV
1 Min Read

ಮಡಿಕೇರಿ: ಪಂಚಾಯತ್‌(Panchayat) ಸಭಾಂಗಣದಲ್ಲಿಯೇ ಅಧ್ಯಕ್ಷನ ಮೇಲೆ ಸದಸ್ಯ ಹಲ್ಲೆ ಮಾಡಿರುವ ಘಟನೆ ಕೊಡಗು(Kodagu) ಜಿಲ್ಲೆಯ ಕುಶಾಲನಗರದ ಏಳನೇ ಹೊಸಕೋಟೆ ಗ್ರಾಮ ನಡೆದಿದೆ.

ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ(General Meeting) ಅಧ್ಯಕ್ಷ ರಮೇಶ್ ಹಾಗೂ ಸದಸ್ಯ ಮುಸ್ತಫಾ ಎಂಬುವವರು ಕಾಮಗಾರಿ ಬಿಲ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಭ ಪಂಚಾಯತ್‌ ಅಧ್ಯಕ್ಷರ ಗಮನಕ್ಕೆ ತರದೇ ಕಾಮಗಾರಿ ‌ಮಾಡಿ‌ ಬಿಲ್ ಮಾಡುವ ಬಗ್ಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್

ಅಷ್ಟೇ ಅಲ್ಲದೇ ಸಭೆ ನಡೆಯುವಾಗಲೇ ಮುಸ್ತಾಫಾ ಅವರು ರಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಅಧ್ಯಕ್ಷ ರಮೇಶ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿ ಸದಸ್ಯ ಮುಸ್ತಫಾನನ್ನು ಬಂಧಿಸುವಂತೆ ಬಿಜೆಪಿಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *