‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಷ್ಟೊಂದು ಅಡೆತಡೆ ಯಾಕೆ? ಇನ್ನೂ ನಿಂತಿಲ್ಲ ಅಪಪ್ರಚಾರ

Public TV
1 Min Read

ಳೆದ ಗುರುವಾರವಷ್ಟೇ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಬಿಡುಗಡೆಯಾಗಿ 24 ಗಂಟೆಯೊಳಗೆ ದುರುಳರು ಸಿನಿಮಾವನ್ನು ಲೀಕ್ ಮಾಡಿದ್ದರು. ಪೈರಸಿ ಮಾಡುವ ಮೂಲಕ ಚಿತ್ರತಂಡಕ್ಕೆ ಟೆನ್ಷನ್ ನೀಡಿದ್ದರು. ಪೈರಸಿಯನ್ನು ಕೊಲ್ಲುವುದಕ್ಕಾಗಿ ಏನೆಲ್ಲ ಸರ್ಕಸ್ ಮಾಡಿದರೂ ಕಳ್ಳರು ಮಾತ್ರ ಸಿನಿಮಾ ಕದಿಯುವುದನ್ನು ನಿಲ್ಲಿಸಲಿಲ್ಲ. ಆದರೂ, ನಿರಂತರ ಪ್ರಯತ್ನ ನಡೆದೇ ಇದೆ. ಈ ಮಧ್ಯೆ ಮತ್ತೊಂದು ಕೆಲಸಕ್ಕೆ ವಿರೋಧಿಗಳು ಮುಂದಾದರು. ಸಿನಿಮಾ ಬಗ್ಗೆ ಅಪಪ್ರಚಾರಕ್ಕೆ ನಿಂತರು.

ಗುರುವಾರ ಮಧ್ಯಾಹ್ನದಿಂದ ಸಿನಿಮಾ ಬಗ್ಗೆ ವಿರೋಧಿಗಳು ಅಪಪ್ರಚಾರ ಶುರು ಮಾಡಿದರು. ಸಿನಿಮಾ ಚೆನ್ನಾಗಿಲ್ಲ, ಕಥೆ ಹಿಡಿಸಲಿಲ್ಲ, ನಿರ್ದೇಶಕರು ಹಾಗೆ ಮಾಡಿದ್ದಾರೆ, ಸುದೀಪ್ ಹೀಗೆ ಮಾಡಿದ್ದರೆ ಹೀಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ನೋಡುಗರ ಮನಸ್ಸನ್ನು ಬೇರಡೆ ಸೆಳೆಯುವ ಪ್ರಯತ್ನ ಮಾಡಿದರು. ಹೀಗೆ ಅಪಪ್ರಚಾರ ಮಾಡುತ್ತಿರುವುದು ಯಾರು ಎನ್ನುವ ಹುಡುಕಾಟ ಕೂಡ ನಡೆಯಿತು. ಮತ್ತೋರ್ವ ನಟನ ಅಭಿಮಾನಿಗಳ ತಲೆಗೆ ಅದನ್ನು ಕಟ್ಟಲೂ ನೋಡಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪಗಳು ಶುರುವಾದವು. ಇದನ್ನೂ ಓದಿ:ಟೂ ಪೀಸ್ ಧರಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ವೇದಿಕಾ

ಸುದೀಪ್ ಅವರ ಸಿನಿಮಾಗೆ ಇಂತಹ ಕಾಟ ಕೊಡುವುದು ಇದೇ ಮೊದಲೇನೂ ಅಲ್ಲ. ಪೈಲ್ವಾನ್ ಸಿನಿಮಾಗೂ ಹೀಗೆಯೇ ಮಾಡಲಾಯಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿ ಮಾಡಿದರು, ಸೋಷಿಯಲ್ ಮೀಡಿಯಾದಲ್ಲಿ ಅದರ ಲಿಂಕ್ ಹಂಚಿಕೊಂಡರು. ಅಲ್ಲದೇ, ಸಿನಿಮಾ ಬಗ್ಗೆಯೂ ನೆಗೆಟಿವ್ ಕಾಮೆಂಟ್ ಹರಿಬಿಟ್ಟರು. ಕೊನೆಗೂ ಪೈರಸಿ ಮಾಡಿದ ಹುಡುಗನನ್ನು ಕಂಡು ಹಿಡಿಯಲಾಯಿತು. ಸ್ವತಃ ಸುದೀಪ್ ಅಭಿಮಾನಿಗಳೇ ಆ ಹುಡುಗನನ್ನು ಹಿಡಿದು ತಂದಿದ್ದರು. ಕೇಸ್ ಆಯಿತು. ಈ ಬಾರಿಯೂ ಅಂಥದ್ದೇ ಕೆಲಸ ನಡೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *