ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

Public TV
1 Min Read

ವಿಜಯಪುರ: ಅಮಾವಾಸ್ಯೆ ಕಳೆದ ಮೇಲೆ ಅಧಿಕಾರ ತೆಗೆದುಕೊಳ್ತೇನೆ. ಅಮಾವಾಸ್ಯೆ ಕಾರಣ ಆರೋಗ್ಯ ಸಚಿವ ಸ್ಥಾನದ ಚಾರ್ಜ್ ತೆಗೆದುಕೊಂಡಿಲ್ಲ ಎಂದು ನೂತನ ಆರೋಗ್ಯ ಸಚಿವ ಶ್ರೀರಾಮುಲು ವಿಜಯಪುರದಲ್ಲಿ ಹೇಳಿದರು.

ಈ ಹೇಳಿಕೆಯಿಂದ ಸಚಿವ ಶ್ರೀರಾಮುಲುಗೆ ಅಮವಾಸ್ಯೆ ಭಯ ಕಾಡುತ್ತಿದಿಯಾ ಎಂಬ ಮಾತುಗಳು ಎಲ್ಲಡೆ ಈಗ ದಟ್ಟವಾಗಿದ್ದು, ಮೂಢ ನಂಬಿಕೆಗೆ ಶ್ರೀರಾಮುಲು ಮೊರೆ ಹೋದರಾ ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ.

ಇದೇ ವೇಳೆ ರಾಮುಲು 4 ಸಾವಿರ ಬೆಲೆಯ ರೋಟೋ ಔಷಧಿ ಇನ್ನು ಮುಂದೆ ಉಚಿತ ಎಂದು ಘೋಷಣೆ ಮಾಡಿದರು. ಹೆರಿಗೆ ನಂತ್ರ ಮಗುವಿಗೆ ನೀಡುವ ಓರಲ್ ಔಷಧಿ ರೋಟೊ ಆಗಿದ್ದು, ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಟೋ ಉಚಿತವಾಗಿ ಹಾಕಲಾಗುತ್ತದೆ. ಸಾವಿರಾರು ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ರೋಟೋ ಔಷಧಿ ಹಾಕಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *