ಭೀಮಾತೀರದ ಹಂತಕನಿಗೆ ಸಿಕ್ತು ಗೌರವ ಡಾಕ್ಟರೇಟ್

Public TV
1 Min Read

ವಿಜಯಪುರ: ಭೀಮಾತೀರದ ಹಂತಕ ಮಹದೇವ ಸಾಹುಕಾರನಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ.

ಏಷಿಯನ್ ಇಂಟರನ್ಯಾಶನಲ್ ಇಂಡೋನೇಷಿಯಾ ಯುನಿವರ್ಸಿಟಿಯವರು ಖುದ್ದಾಗಿ, ಮಹದೇವ ಸಾಹುಕಾರನ ಸ್ವಗ್ರಾಮವಾದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೆರೂರಿನ ಗ್ರಾಮಕ್ಕೆ ತೆರಳಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದ್ದಾರೆ.

ಮಹದೇವ ಸಾಹುಕಾರ ಒಡೆತನದ ಭೈರವನಾಥ ಶಿಕ್ಷಣ ಸಂಸ್ಥೆಯಿಂದ ಬಡಮಕ್ಕಳಿಗೆ ಶಿಕ್ಷಣ ಮತ್ತು ಹಲವು ಸಾಮಾಜಿಕ ಸೇವೆಯನ್ನು ಗುರುತಿಸಿದ ಏಷಿಯನ್ ಇಂಟರನ್ಯಾಶನಲ್ ಇಂಡೋನೇಷಿಯಾ ಯುನಿವರ್ಸಿಟಿಯ ಕರ್ನಾಟಕದ ಸಂಯೋಜಕ ಡಾ. ರಾಜು ರೋಖಡೆಯವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ.

ಭೀಮಾ ತೀರದ ಹಂತದ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಹಾಗೂ ಆತನ ತಮ್ಮ ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಸೇರಿ ಮೂವರಿಗೆ ಏಪ್ರಿಲ್ ತಿಂಗಳಿನಲ್ಲಿ ಕಲಬುರಗಿ ಸಂಚಾರಿ ಹೈಕೋರ್ಟ್ ಪೀಠ ಜಾಮೀನು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *