ಮಾವುತರಿಗೆ ಕುಕ್ಕರ್ ಗಿಫ್ಟ್‌ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್‌

Public TV
1 Min Read
Vijayalakshmi Darshan 2

ದರ್ಶನ್ ಜೈಲು ಪಾಲಾದ್ರೂ ಮೈಸೂರು ನಂಟು ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಮರೆಯದಿರುವುದು ವಿಶೇಷ. ದರ್ಶನ್ ಅನುಪಸ್ಥಿತಿಯಲ್ಲೂ ಅವರ ಪತ್ನಿ ವಿಜಯಲಕ್ಷ್ಮಿ ದಸರಾ ಆನೆ ಮಾವುತರ ಕುಟುಂಬಕ್ಕೆ ಉಡುಗೊರೆ ಕೊಟ್ಟು ಊಟ ಹಾಕಿಸಿದ್ದಾರೆ.

ದರ್ಶನ್‌ (Darshan) ತಾಯಿ ಕೂಡ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನೋಡಿ ಖುಷಿ ಪಟ್ಟರು. ಮಾವುತರ 60 ಕುಟುಂಬಕ್ಕೆ ವಿಜಯಲಕ್ಷ್ಮಿ ಕುಕ್ಕರ್ ಉಡುಗೊರೆ ನೀಡಿದ್ದಾರೆ. ಜೊತೆಗೆ ಭೋಜನದ ವ್ಯವಸ್ಥೆ ಮಾಡಿಸಿದ್ದರು.

Vijayalakshmi Darshan 3

ಮೈಸೂರಿನ ದಸರಾ ಆನೆ (Mysuru Dasara Elephants) ನೋಡಿ ಖುಷಿಪಟ್ಟ ವಿಜಯಲಕ್ಷ್ಮಿ ಮಾವುತರಿಗೆ ಕೈಯ್ಯಾರೆ ಕುಕ್ಕರ್ ಕೊಟ್ಟಿದಾರೆ. ವಿಜಯಲಕ್ಷ್ಮಿಯವರ ಈ ಕೆಲಸಕ್ಕೆ ನಟ ಧನ್ವಿರ್ ಜೊತೆಯಾಗಿದ್ರು. ಮಾವುತರು ಒಬ್ಬೊಬ್ರಾಗಿ ಬಂದು ವಿಜಯಲಕ್ಷ್ಮಿ ಅವರಿಂದ ಕುಕ್ಕರ್ ಸ್ವೀಕರಿಸಿದ್ರು. ಹಿಂದೆ ದರ್ಶನ್ ಅನೇಕ ಬಾರಿ ಮೈಸೂರಿಗೆ ಭೇಟಿ ಕೊಟ್ಟು ಮಾವುತರಿಗೆ ಸಹಾಯ ಮಾಡಿದ್ದರಂತೆ. ಇದೀಗ ಆ ಪರಂಪರೆಯನ್ನ ವಿಜಯಲಕ್ಷ್ಮಿ ಮುಂದುವರಿಸಿದ್ದಾರೆ ಎನ್ನಲಾಗ್ತಿದೆ.

Vijayalakshmi Darshan 4

ಸೆಪ್ಟೆಂಬರ್ 22 ರಿಂದ ಅಕ್ಟೋಬರ್‌ 2ರ ವರೆಗೆ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ದಸರಾ ಮೆರವಣಿಗೆಯಲ್ಲಿ ಭಾಗಿಯಾಗುವ 2 ತಂಡದ 14 ಆನೆಗಳು ಈಗಾಗಳೇ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿವೆ.

Share This Article