ಬೆಂಗಳೂರಿನಲ್ಲಿ ನೀರಿನ ಕಳ್ಳತನ ತಡೆಯಲು ವಿಜಿಲೆನ್ಸ್ ಪಡೆ ಸ್ಥಾಪನೆ: ಬೊಮ್ಮಾಯಿ

Public TV
2 Min Read

ಬೆಂಗಳೂರು: ನಗರದಲ್ಲಿ ನೀರಿನ ಕಳ್ಳತನ (Water Theft) ತಡೆಯಲು ಬಿಡಬ್ಲ್ಯುಎಸ್‌ಎಸ್‌ಬಿಗೆ (BWSSB) ವಿಶೇಷ ವಿಜಿಲೆನ್ಸ್ ಪಡೆ ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಬೆಂಗಳೂರು (Bengaluru) ನೀರಿನ ಅಕ್ರಮದ ಬಗ್ಗೆ ಪ್ರಶ್ನೆ ಕೇಳಿ ಅಕ್ರಮ ನೀರಿನ ಸಂಪರ್ಕಗಳಿಗೆ ಕಡಿವಾಣ ಹಾಕಬೇಕು. ಪೋಲಾಗುತ್ತಿರುವ ನೀರನ್ನು ತಡೆಯಬೇಕು ಎಂದು ಒತ್ತಾಯ ಮಾಡಿದರು.

ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರಕ್ಕೆ ಕಾವೇರಿ ಮೂಲದಿಂದ 1,450 ದಶಲಕ್ಷ ಲೀಟರ್ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಪ್ರಸ್ತುತ 10.64 ಲಕ್ಷ ಸಂಪರ್ಕಗಳಿಂದ ನಿತ್ಯ 3.83 ಕೋಟಿ ಬಿಲ್ಲು ಸಂಗ್ರಹವಾಗುತ್ತಿದೆ. 29% ನೀರು ಬೆಂಗಳೂರಿನಲ್ಲಿ ಪೋಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಡಬ್ಲ್ಯುಎಸ್‌ಎಸ್‌ಬಿ ಮೊದಲಿನಿಂದಲೂ ಅನೇಕ ಸಮಸ್ಯೆ ಎದುರಿಸುತ್ತಿದೆ. ಸರಿಯಾದ ಪೈಪ್ ಲೈನ್ ಇಲ್ಲ, ನೀರಿನ ಸೋರಿಕೆ ಇದೆ. 30-40 ವರ್ಷದಿಂದ ಇದು ನಡೆದುಕೊಂಡು ಬಂದಿದೆ. 50 ವರ್ಷಗಳ ಹಿಂದೆ ಪೈಪ್ ಹಾಕಲಾಗಿತ್ತು. ಇಲ್ಲಿ ನೀರಿನ ಸೋರಿಕೆ ಆಗುತ್ತಿದೆ. ಈಗ ಹೊಸದಾಗಿ ಪೈಪ್ ಹಾಕುತ್ತಿದ್ದೇವೆ. ನಾನು ಸಿಎಂ ಆಗುವ ಮುನ್ನ 37% ಅನಧಿಕೃತ ನೀರು ಸರಬರಾಜು ಇತ್ತು. ಈಗ 29% ಕ್ಕೆ ಇದನ್ನು ಇಳಿಸಿದ್ದೇವೆ. ಇದನ್ನು 0% ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಗುತ್ತಿಗೆ ಆಧಾರದ ನೇಮಕಾತಿಗೂ ಮೀಸಲಾತಿ ಜಾರಿ: ಬೊಮ್ಮಾಯಿ

ಸದ್ಯ 22 ಕಿ.ಮೀ ಹೊಸದಾಗಿ ಪೈಪ್ ಹಾಕುತ್ತಿದ್ದೇವೆ.ನೀರು ಕಳ್ಳತನ ತಡೆಯಲು ಬಿಡಬ್ಲ್ಯುಎಸ್‌ಎಸ್‌ಬಿಗೆ ಒಂದು ವಿಶೇಷ ವಿಜಿಲೆನ್ಸ್ ಪಡೆ ಸ್ಥಾಪನೆ ಮಾಡುತ್ತೇವೆ. ನೀರಿನ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲು ಆಗಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ನೀರಿನ ಸಂಪರ್ಕದ ಲೆಕ್ಕ ಇಡಲು ಸಂಪೂರ್ಣ ಸಂಪರ್ಕಗಳಿಗೆ ಮೀಟರ್ ಅಳವಡಿಕೆ ಮಾಡುತ್ತೇವೆ ಎಂದು ಭರವಸೆಯನ್ನು ಕೊಟ್ಟರು. ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಯತ್ನಾಳ್ ಖಂಡನೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *