ಹಕ್ಕುಚ್ಯುತಿ ಹಠದ ಹಿಂದೆ ತಾಂತ್ರಿಕ ಲೆಕ್ಕಾಚಾರ

Public TV
1 Min Read

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಡುವಿನ ಸದನದ ಗಲಾಟೆ ವಿಚಾರವಾಗಿ ವಿಪಕ್ಷ ಮತ್ತು ಆಡಳಿತ ಪಕ್ಷಗಳು ಪರಸ್ಪರ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿವೆ. ಆದರೆ ಇದರ ಹಿಂದೆ ತಾಂತ್ರಿಕ ಅಂಶದ ಲೆಕ್ಕಾಚಾರ ಇಟ್ಟುಕೊಂಡು ಪರಸ್ಪರ ಒಬ್ಬರನೊಬ್ಬರು ಇಕ್ಕಟ್ಟಿಗೆ ಸಿಲುಕಿಸುವ ಹಠಕ್ಕೆ ಬಿದ್ದಿದ್ದಾರೆ.

ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆಯ ಹಿಂದೆ ತಾಂತ್ರಿಕ ಲೆಕ್ಕಾಚಾರವಿದೆ. ರಮೇಶ್ ಕುಮಾರ್ ಅವಾಚ್ಯ ಪದ ಬಳಸಿದ್ದು ಸದನದ ಬಾವಿಯಲ್ಲಿ ನಿಂತು. ಸುಧಾಕರ್ ಅವಾಚ್ಯ ಪದ ಬಳಸಿದ್ದು ಸದನದಲ್ಲಿರುವ ತಮ್ಮ ಸ್ಥಳದಲ್ಲಿ ನಿಂತು. ಬಾವಿಗಿಳಿದು ಆಡಿದ ಮಾತು ಸದನದಲ್ಲಿ ಕಡತಕ್ಕೆ ಹೋಗಲ್ಲ. ಆದ್ದರಿಂದ ರಮೇಶ್ ಕುಮಾರ್ ಮಾತನಾಡಿದ್ದಕ್ಕೆ ಸದನದಲ್ಲಿ ಯಾವುದೇ ದಾಖಲೆ ಇಲ್ಲ. ಆದರೆ ಸುಧಾಕರ್ ಮಾತು ಕಡತಕ್ಕೆ ಎಂಟ್ರಿಯಾಗಿದೆ.

ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆಗೆ ನೈಜವಾದ ಕಾರಣ ಇದೆ ಮತ್ತು ದಾಖಲೆಯು ಇದೆ. ಆದ್ದರಿಂದ ಕಾಂಗ್ರೆಸ್ ಪಟ್ಟು ಹಿಡಿದು ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿದೆ. ಹೀಗಾಗಿ ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಿದೆ. ಸುಧಾಕರ್ ಹಕ್ಕುಚ್ಯುತಿ ಮಂಡಿಸಬಹುದು. ಆದರೆ ಅವರ ಹಕ್ಕುಚ್ಯುತಿ ಮಂಡನೆಗೆ ಸದನದ ನಿಯಮದ ಪ್ರಕಾರ ದಾಖಲೆ ಸಿಗಲ್ಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.

ಬಿಜೆಪಿ ಪಾಳಯದ ಲೆಕ್ಕಾಚಾರವೇ ಬೇರೆ ಇದೆ. ರಮೇಶ್ ಕುಮಾರ್ ಮೊದಲು ಅವಾಚ್ಯ ಪದ ಬಳಸಿದ್ದು ಬಾವಿಗಿ ಇಳಿಯುವ ಮುನ್ನ. ಅವಾಚ್ಯ ಪದ ಬಳಕೆ ಮಾಡಿದ ನಂತರ ಅವರು ಸದನದ ಬಾವಿಗೆ ಬಂದಿದ್ದಾರೆ. ಆ ಮೂಲಕ ರಮೇಶ್ ಕುಮಾರ್ ಆಡಿದ ಮಾತು ಸಹ ಸದನದಲ್ಲಿ ದಾಖಲಾಗಿರುತ್ತದೆ. ಆದ್ದರಿಂದ ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಸಹ ಹಕ್ಕುಚ್ಯುತಿ ಮಂಡನೆಗೆ ತೀರ್ಮಾನ ಮಾಡಿದ್ದಾರೆ. ಹೀಗೆ ರಮೇಶ್ ಕುಮಾರ್ ಹಾಗೂ ಸುಧಾಕರ್ ಇಬ್ಬರು ಪರಸ್ಪರ ತಾಂತ್ರಿಕ ಅಂಶವನ್ನು ಮುಂದಿಟ್ಟುಕೊಂಡು ಹಕ್ಕುಚ್ಯುತಿ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *