100 ಅಡಿ ಸೇತುವೆಯಿಂದ ಜಿಗಿದು ಅರ್ಧ ಕಿ.ಮೀ ಈಜಿ ಯುವಕರಿಂದ ಕಾವೇರಿಗೆ ಬಾಗಿನ ಸಮರ್ಪಣೆ!

Public TV
1 Min Read

ಮೈಸೂರು: ಜಲಾಶಯಗಳು ಭರ್ತಿಯಾದರೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುವುದು ನೋಡಿದ್ದೇವೆ. ಆದರೆ ಮೈಸೂರು ಜಿಲ್ಲೆಯ ಒಂದು ಗ್ರಾಮದಲ್ಲಿ ಯುವಕರು ತುಂಬಿ ಹರಿಯುತ್ತಿರುವ ನದಿಗೆ ಜಿಗಿದು ಬಾಗಿನ ಸಮರ್ಪಣೆ ಮಾಡುವ ವಿಶಿಷ್ಟ ಆಚರಣೆ ರೂಢಿಸಿಕೊಂಡು ಬಂದಿದ್ದಾರೆ.

ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಬನ್ನೂರಿನ ರಾಮಸಮುದ್ರ ಗ್ರಾಮದ ಯುವಕರು 100 ಅಡಿ ಎತ್ತರದ ಕಾವೇರಿ ಸೇತುವೆ ಮೇಲಿಂದ ಜಂಪ್ ಮಾಡಿ ಗಂಗಮ್ಮ ತಾಯಿ ಪೂಜೆ ನೆರವೇರಿಸಿದ್ದಾರೆ.

ಪ್ರತಿಬಾರಿ ಕಾವೇರಿ ತುಂಬಿದಾಗ ರಂಗಸಮುದ್ರ ಗ್ರಾಮಸ್ಥರು ಸೇತುವೆಯಿಂದ ಜಿಗಿದು ಗಂಗಮ್ಮ ತಾಯಿಗೆ ಪೂಜೆ ಮಾಡಿ ಕಾವೇರಿಗೆ ಬಾಗಿನ ಅರ್ಪಿಸುತ್ತಾರೆ. ರಂಗಸಮುದ್ರ ಗ್ರಾಮದ ಯುವಕರಾದ ಹರ್ಷ ಗೌಡ, ಶಿವು ಗೌಡ ರಘು, ಯೋಗೆಶ್ ಮಲ್ಲೇಶ್ ಸೇರಿದಂತೆ ಹಲವಾರು ನೂರು ಅಡಿ ಸೇತುವೆಯಿಂದ ಕೆಳಗೆ ಜಿಗಿದು ಅರ್ಧ ಕಿಲೋಮೀಟರ್ ಈಜಿ ದಡ ಸೇರಿದರು.

https://www.youtube.com/watch?v=-lceY-hLC_E

Share This Article
Leave a Comment

Leave a Reply

Your email address will not be published. Required fields are marked *