ಬಂಡೀಪುರದಲ್ಲಿ ಕಬ್ಬಿಣದ ಕಂಬಿಗಳನ್ನು ದಾಟಿ ಆನೆ ನಾಡಿಗೆ ಬರೋದನ್ನು ನೋಡಿ

Public TV
1 Min Read

ಚಾಮರಾಜನಗರ:ಆನೆ ನಡೆದದ್ದೆ ದಾರಿ ಅಂತ ಹೇಳ್ತಾರೆ. ಆ ಮಾತಿಗೆ ಪುಷ್ಟಿ ನೀಡುವಂತಹ ದೃಶ್ಯವೊಂದು ಕ್ಯಾಮೆರಾ ದಲ್ಲಿ ಸೆರೆಯಾಗಿದೆ

ಹೌದು ಆನೆಗಳು ಆಹಾರ ಅರಸಿ ನಾಡಿನ ಕಡೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವರದಿಯಾಗುತ್ತಿದೆ. ಕಾಡಾನೆಗಳು ಆಹಾರ ಅರಸಿ ನಾಡಿನತ್ತ ಬರುವುದನ್ನು ತಪ್ಪಿಸಲು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ನಾಗರಹೊಳೆ ವ್ಯಾಪ್ತಿಯಲ್ಲಿ ಕಾಡಂಚಿನಲ್ಲಿ ರೈಲ್ವೇ ಕಂಬಿಗಳನ್ನು ಅಳವಡಿಸಲಾಗಿದೆ. ಆದರೆ ಆನೆಗಳು ಮಾತ್ರ ಕಬ್ಬಿಣದ ಕಂಬಿಯನ್ನು ದಾಟಿ ನಾಡಿನ ಕಡೆ ಧಾವಿಸಿ ಬರುತ್ತಿವೆ.

ಬಂಡೀಪುರದ ಒಂದು ದೃಶ್ಯದಲ್ಲಿ ಆನೆ ರೈಲ್ವೆ ಕಂಬಿಯನ್ನು ದಾಟಲು ಶತ ಪ್ರಯತ್ನ ನಡೆಸುತ್ತಿರುವ ದೃಶ್ಯ ಸೆರೆಯಾಗಿದ್ದರೆ, ಮತ್ತೊಂದು ಚಿತ್ರಗಳಲ್ಲಿ ಆನೆ ರೈಲು ಕಂಬಿಗಳನ್ನು ಸುಲಭವಾಗಿ ದಾಟಿ ನಾಡಿನ ಕಡೆ ಬಂದಿರುವ ದೃಶ್ಯ ಸೆರೆಯಾಗಿದೆ.

 

 

 

Share This Article
Leave a Comment

Leave a Reply

Your email address will not be published. Required fields are marked *