ಬಿಎಸ್‍ವೈಗಾಗಿ ಕುಳಿತಿದ್ದ ಕುರ್ಚಿ ಬಿಟ್ಟು ಕೊಟ್ರು ಎಚ್‍ಡಿಕೆ- ಮಾಜಿ ಸಿಎಂ ಜೊತೆ ಭೋಜನ- ವಿಡಿಯೋ ನೋಡಿ

Public TV
1 Min Read

ಬೆಂಗಳೂರು: ಸದನದಲ್ಲಿ ಭಾರೀ ಚಕಮುಕಿ ನಡೆಸುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮುಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಮರೆತು ಔತಣಕೂಟದಲ್ಲಿ ಭಾಗವಹಸಿ, ಸಹಕಾರದಿಂದ ನಡೆದುಕೊಂಡಿದ್ದಾರೆ.

ಇಂದು ಮಧ್ಯಾಹ್ನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ಸಿಎಂ ಕುಮಾರಸ್ವಾಮಿ ಅವರು ಭೋಜನ ಕೂಟ ಆಯೋಜಿಸಿದ್ದರು. ಔತಣಕೂಟಕ್ಕೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಆಗಮಿಸುತ್ತಿದಂತೆ ಅವರನ್ನು ಕುಮಾರಸ್ವಾಮಿ ಕೈ ಕುಲುಕಿ ಆಹ್ವಾನಿಸಿ, ತಾವು ಕುಳಿತಿದ್ದ ಕುರ್ಚಿಯನ್ನು ಬಿಟ್ಟುಕೊಟ್ಟರು.

ಕುಮಾರಸ್ವಾಮಿ ಅವರ ಸ್ಥಾನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಭೋಜನ ಸವಿದರು. ಕಲಾಪದ ಚರ್ಚೆಗಳನ್ನು, ರಾಜಕೀಯ ಅಸಮಾಧಾನವನ್ನು ಬದಿಗಿಟ್ಟು ಔತಣಕೂಟದಲ್ಲಿ ಭಾಗಿಯಾಗಿದರು. ಯಡಿಯೂರಪ್ಪ, ಸಿದ್ದರಾಮಯ್ಯ ಜೊತೆಯಲ್ಲೇ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ ಹೊರಟ್ಟಿ ಸಹ ಭೋಜನ ಸವಿದರು.

https://youtu.be/WnaOqCajyjc

Share This Article
1 Comment

Leave a Reply

Your email address will not be published. Required fields are marked *