ಇಂದು ಉಪರಾಷ್ಟ್ರಪತಿ ಚುನಾವಣೆಗೆ ವೋಟಿಂಗ್ – NDA ಅಭ್ಯರ್ಥಿ ಜಗದೀಪ್ ಧನ್ಕರ್ ಆಯ್ಕೆ ಖಚಿತ

Public TV
1 Min Read

ನವದೆಹಲಿ: ಹಾಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅವಧಿ ಅಂತ್ಯವಾಗ್ತಿರುವ ಹಿನ್ನೆಲೆಯಲ್ಲಿ ಇಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಸಂಸತ್ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 788 ಸಂಸದರು ಮತ ಹಕ್ಕು ವಿನಿಯೋಗಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: 

ಎನ್‌ಡಿಎಗೆ ಸ್ಪಷ್ಟ ಮೆಜಾರಿಟಿ ಇರುವ ಕಾರಣ ಜಗದೀಪ್ ಧನ್ಕರ್ ಉಪರಾಷ್ಟ್ರಪತಿ ಆಗೋದು ಬಹುತೇಕ ಖಚಿತವಾಗಿದೆ. ಜಗದೀಪ್ ಧನ್ಕರ್‌ಗೆ ಎನ್‌ಡಿಎಯೇತರ ಪಕ್ಷಗಳಾದ ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಬಿಜೆಡಿ, ಆರ್‌ಎಲ್‌ಜೆಪಿ ಬೆಂಬಲ ಪ್ರಕಟಿಸಿವೆ. ಹಿಗಾಗಿ 510ಕ್ಕೂ ಹೆಚ್ಚು ಮತಗಳು ಧನ್ಕರ್‌ಗೆ ಲಭಿಸುವ ಸಾಧ್ಯತೆಯಿದೆ.

ಸೋಲುವುದು ಗೊತ್ತಿದ್ದರೂ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ ಸ್ಪರ್ಧೆ ಮಾಡಿದ್ದಾರೆ. ವಿಪಕ್ಷಗಳ ಅಭ್ಯರ್ಥಿಯಾದ ಮಾರ್ಗರೇಟ್ ಆಳ್ವಾಗೆ ಕಾಂಗ್ರೆಸ್, ಎನ್‌ಸಿಪಿ, ಜೆಎಂಎಂ, ಡಿಎಂಕೆ, ಟಿಆರ್‌ಎಸ್, ಎಎಪಿ ಬೆಂಬಲ ಘೋಷಿಸಿವೆ. ಟಿಎಂಸಿ ಮತದಾನದಿಂದಲೇ ದೂರ ಉಳಿದಿದೆ. ಆಗಸ್ಟ್ 10ರಂದು ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವಧಿ ಮುಗಿಯಲಿದೆ. ಆಗಸ್ಟ್ 11 ರಂದು ನೂತನ ಉಪರಾಷ್ಟ್ರಪತಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *