ಹಾವೇರಿಯ ಹಿರಿಯ ಪತ್ರಕರ್ತ ಅಂಗೂರವರಿಗೆ ಪ್ರಗತಿ ಎನ್‍ಜಿಓದಿಂದ ಸನ್ಮಾನ

Public TV
1 Min Read

ಹಾವೇರಿ: ನಗರದ ಪ್ರಗತಿ ಮೈನಾರಟಿ ವೆಲ್‍ಫೇರ್ ಎಜುಕೇಶನ್ & ರೂರಲ್ ಡೆವಲಪ್‍ಮೆಂಟ್ ಸೊಸೈಟಿ ವತಿಯಿಂದ ಇತ್ತಿಚಿಗೆ ಕರ್ನಾಟಕ ಮಾಧ್ಯಮ ಅಕಾಡಮಿಯಿಂದ ಪ್ರಶಸ್ತಿ ಪುರಸ್ಕೃತರಾದ ಹಾವೇರಿಯ ಕೌರವ ಪತ್ರಿಕೆಯ ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಇವರಿಗೆ ಹೊಸಮಠದ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸನ್ಮಾನ ಮಾಡಲಾಯಿತು.

ಮಾಲತೇಶ ಅಂಗೂರವರು ಪತ್ರಿಕಾ ರಂಗದಲ್ಲಿ ಕಳೆದ 20 ವರ್ಷಗಳಿಂದ ಅಪಾರ ಸೇವೆ ಮಾಡಿದ್ದರಿಂದ ಕರ್ನಾಟಕ ಮಾಧ್ಯಮ ಅಕಾಡಮಿಯಿಂದ ಪ್ರಶಸ್ತಿ ಬಂದಿದೆ. ಈ ವಿಚಾರ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅಂಗೂರವರ ಪತ್ರಿಕಾ ಸೇವೆ ಸದಾ ಸಮಾಜದ ಅಂಕುಡೊಂಕು ತಿದ್ದುವುದರ ಮೂಲಕ ಜಾಗೃತಿ ನೀಡುತ್ತಾ ಸಮಾನತೆಗಾಗಿ ತಮ್ಮ ಹರಿತವಾದ ಲೇಖನಿಯಿಂದ ತಪ್ಪಿತಸ್ಥರನ್ನು ಎಚ್ಚರಿಸುತ್ತಾ ಅವರನ್ನು ತಿದ್ದುತ್ತಾ ಬಂದಿದ್ದಾರೆ. ಅವರಿಗಾಗಿ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಸಂಸ್ಥೆಯ ಶಾಬಾಷಖಾನ ಅಧ್ಯಕ್ಷರಾದ ಕುಲಕರ್ಣಿ ಹೇಳಿದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಶಾಹೀದ ದೇವಿಹೋಸೂರ, ಯುವ ಮುಖಂಡರಾದ ದಾದಾಪೀರ ಚೂಡಿಗಾರ, ಶ್ರೀನಿವಾಸ ಮುಗದೂರ ಜಯ ಕರ್ನಾಟಕ ಸಂಘಟನೆಯ ಜಂಟಿ ಕಾರ್ಯದರ್ಶಿ ಕರೀಮ ಅತ್ತಾರ, ಸುಭಾಸ ಬಡಿಗೇರ, ನವೀದ್ ಅಮ್ಮಿನಬಾವಿ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *