ಅಭಿನವ ಹಾಲಶ್ರೀಗೆ ಸೇರಿದ ಎಲ್ಲಾ ಬ್ಯಾಂಕ್ ದಾಖಲೆ ಪರಿಶೀಲನೆ

Public TV
1 Min Read

ವಿಜಯನಗರ: ಚೈತ್ರಾ ಕುಂದಾಪುರ (Chaithra Kundapura) ಹಾಗೂ ಗ್ಯಾಂಗ್ ನಡೆಸಿರುವ ಡೀಲ್ ಪ್ರಕರಣದ ವಿಚಾರಣೆಯನ್ನು ಸಿಸಿಬಿ (CCB) ಪೊಲೀಸರು ತೀವ್ರವಾಗಿ ನಡೆಸುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ (Fraud Case) ಸಿಸಿಬಿ ಪೊಲೀಸರು ಬಂಧಿಸಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು (Halashree Swamiji) ಹರಪನಹಳ್ಳಿ ಸರ್ಕಾರಿ ಪ್ರವಾಸಿ ಮಂದಿರದ ಗಣ್ಯರ ಅತಿಥಿಗೃಹದಲ್ಲಿ ಇಡೀ ದಿನ ವಿಚಾರಣೆಗೆ ಒಳಪಡಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಬುಧವಾರ ರಾತಿ ಹಾಲಶ್ರೀಯನ್ನು ಹಿರೇಹಡಗಲಿ ಮಠಕ್ಕೆ ಕರೆದೊಯ್ದು ಮಹಜರು ನಡೆಸಿದ ಬಳಿಕ ಮಧ್ಯರಾತ್ರಿ 12:30ಕ್ಕೆ ಹರಪನಹಳ್ಳಿಯ ಪ್ರವಾಸಿ ಮಂದಿರ ಮತ್ತು ಗಣ್ಯರ ಅತಿಥಿಗೃಹದ ತಲಾ ಎರಡು ಕೊಠಡಿಗಳನ್ನು ಸಿಸಿಬಿ ತಂಡ ಪಡೆದಿತ್ತು. ತಡರಾತ್ರಿ ಊಟ ಮಾಡಿ, ನಸುಕಿನ ಜಾವ 3:30ರವರೆಗೆ ವಿಚಾರಣೆ ನಡೆಯಿತು. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ – ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು

ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ ಬೆಳಗ್ಗೆ 9 ಗಂಟೆಯಿಂದ ವಿಚಾರಣೆ ಮುಂದುವರೆಯಿತು. ಸಂಜೆ 4:30ಕ್ಕೆ ಪುನಃ ಹಿರೇಹಡಗಲಿಯತ್ತ ವಾಹನಗಳು ತೆರಳಿದಾಗ, ಹಾಲಶ್ರೀ ಸ್ವಾಮೀಜಿ ಮುಖವನ್ನು ಶಾಲಿನಿಂದ ಮುಚ್ಚಿ ಮಠಕ್ಕೆ ಕರೆತರಲಾಗಿತ್ತು. ಇದನ್ನೂ ಓದಿ: ಡಾನ್ಸ್‌ ಕ್ಲಾಸ್‌ಗೆ ಹೋಗಬೇಡ ಎಂದ ಪೋಷಕರು – ಮನನೊಂದು ಯುವತಿ ಆತ್ಮಹತ್ಯೆ

ಹಿರೇಹಡಗಲಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB) ಮತ್ತು ಬಿಡಿಸಿಸಿ ಬ್ಯಾಂಕ್‌ಗೆ ಸಿಸಿಬಿ ಪೊಲೀಸರು ಭೇಟಿ ನೀಡಿ ಸ್ವಾಮೀಜಿ ಹೊಂದಿರುವ ಖಾತೆಗಳ ಮಾಹಿತಿ ಪಡೆದರು. ಪಡೆದರು. ಕೆಜಿಬಿ ಬ್ಯಾಂಕ್‌ನಲ್ಲಿ ಸ್ವಾಮೀಜಿಗೆ ಸೇರಿದ ಲಾಕರ್ ತೆಗೆಸಿ ಪರಿಶೀಲಿಸಿದರು. ಹೂವಿನಹಡಗಲಿ ಐಡಿಎಫ್‌ಸಿ ಬ್ಯಾಂಕ್‌ನಲ್ಲಿನ ಸ್ವಾಮೀಜಿ ಖಾತೆಯ ಹಣಕಾಸು ವಹಿವಾಟಿನ ದಾಖಲೆಯನ್ನು ಸಿಸಿಬಿ ಪೊಲೀಸರು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸಾಬೂನು ಕಾರ್ಖಾನೆಗೆ ತ್ವರಿತ ಗತಿಯಲ್ಲಿ ಕಾರ್ಪೊರೇಟ್ ರೂಪ: ಎಂ.ಬಿ ಪಾಟೀಲ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್