ಬಿಸಿಲನಾಡು ವಿಜಯಪುರದಲ್ಲಿ ಇಬ್ಬನಿಯ ಅಬ್ಬರಕ್ಕೆ ಪರದಾಡಿದ ವಾಹನ ಸವಾರರು

Public TV
1 Min Read

ವಿಜಯಪುರ: ಬಿಸಿಲ ನಾಡು ಗುಮ್ಮಟ ನಗರಿ ವಿಜಯಪುರದಲ್ಲಿ ಈಗ ಇಬ್ಬನಿಯ ಅಬ್ಬರ ಶುರುವಾಗಿದೆ.

ಗುಮ್ಮಟ ನಗರಿಯಲ್ಲಿ ಮಿತಿಮೀರಿದ ಮೈ ಕೊರೆಯುವ ಚಳಿ ಆರಂಭವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಾಗಿರುವ ಚಳಿಯಿಂದ ಜನರು ತತ್ತರಿಸಿದ್ದು, ಬುಧವಾರ ಬಿದ್ದ ಭಾರೀ ಪ್ರಮಾಣದ ಇಬ್ಬನಿಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.

ಜನರು ಹಾಗೂ ವಾಹನಗಳು ಬೆಳಗ್ಗೆ ಎಂಟು ಗಂಟೆ ಆದರೂ ರಸ್ತೆ ಮೇಲೆ ಕಾಣಿಸುತ್ತಿಲ್ಲ. ಎದುರಿಗೆ ಬರುವ ವಾಹನಗಳು ಕಾಣದಂತಾಗಿದ್ದು ಸವಾರರ ಪರದಾಟಕ್ಕೆ ಕಾರಣವಾಗಿತ್ತು. ಮೊದಲ ಬಾರಿಗೆ ಆವರಿಸಿದ ಮಂಜಿನಿಂದಾಗಿ ವಿಜಯಪುರ ಜನತೆ ಒಂದೆಡೆ ಪರದಾಡಿದರೆ, ಇನ್ನೊಂದೆಡೆ ಬಿಸಿಲ ನಾಡಲ್ಲಿ ಮಲೆನಾಡ ಸೊಬಗು ಕಂಡು ಫುಲ್ ಖುಷಿಯಾಗಿದ್ದಾರೆ.

ಬರದಿಂದ ಕಂಗಲಾಗಿದ್ದ ಜಿಲ್ಲೆಯ ರೈತರು ಇಬ್ಬನಿಯನ್ನು ಕಂಡು ಕೊಂಚ ಸಂತಸಗೊಂಡಿದ್ದಾರೆ. ಇಬ್ಬನಿಯಿಂದ ಜೋಳ ಸೇರಿದಂತೆ ಕೆಲ ಬೆಳೆಗಳು ಚೆನ್ನಾಗಿ ಬರಲಿರುವ ಕಾರಣ ರೈತರು ಸಂತೋಷದಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *