ಪಕ್ಷಾಂತರಿಗಳನ್ನ ನಾಯಿಗೆ ಹೋಲಿಸಿದ ವಾಟಾಳ್ ನಾಗರಾಜ್

Public TV
2 Min Read

ಹುಬ್ಬಳ್ಳಿ: ಚುನಾವಣೆಯಲ್ಲಿ ಒಂದು ಪಕ್ಷದಿಂದ ಗೆದ್ದ ಬಳಿಕ ಮತ್ತೊಂದು ಪಕ್ಷಕ್ಕೆ ಹಾರುವ ಶಾಸಕರನ್ನು ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡುಲು ಪ್ರಯತ್ನಿಸುತ್ತಿರುವ ನಾಯಕರಿಗೆ ಯಾವುದೇ ಭಯ ಇಲ್ಲ. ಆಪರೇಷನ್ ಮಾಡ ಹೊರಟಿರುವ ಇವರ ಈ ನಡೆ ಸಂವಿಧಾನದ ವಿರುದ್ಧವಾಗಿದ್ದು, ರಾಜ್ಯದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಪಕ್ಷದವಾದರು ಆಡುತ್ತಿರುವ ನಾಟಕ ಚುನಾವಣಾ ಆಯೋಗಕ್ಕೆ ಗೊತ್ತು. ಆದರೆ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಇದನ್ನು ನೋಡುತ್ತಿರುವ ರಾಜ್ಯದ ಜನತೆ ಮಾತ್ರ ಸುಮ್ಮನೆ ಇರಲ್ಲಾ. ಅವರಿಗೆ ಪಕ್ಕ ಪಾಠ ಕಲಿಸುತ್ತಾರೆ ಎಂದರು. ಅಲ್ಲದೇ ಒಂದು ಸಾಕು ನಾಯಿ ತನ್ನನ್ನು ಸಾಕಿದ ಮಾಲೀಕನಿಗೆ ಕೊನೆಯವರೆಗೂ ನಿಯತ್ತಿನಿಂದ ಇರುತ್ತೆ. ಆದರೆ ಒಂದು ಪಕ್ಷದಲ್ಲಿ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗುವವರು ನಾಯಿಗಂತ ಕಡೆ ಎಂದು ಹೇಳುವ ಮೂಲಕ ಪಕ್ಷಾಂತರ ಹೊರಟ ನಾಯಕರ ವಿರುದ್ಧ ಗುಡುಗಿದರು.

ಇದಕ್ಕೂ ಮುನ್ನ ನಾಡೋಜ ಡಾ. ಪಾಟೀಲ ಪುಟ್ಟಪ್ಪರವರಿಗೆ 100 ನೇ ವರ್ಷ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರು ಪಾಟೀಲ್ ಪುಟ್ಟಪ್ಪರವರ ಮನೆಗೆ ಭೇಟಿ ನೀಡಿ ಸನ್ಮಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ನಾಡಿನ ಜನತೆ ಎಲ್ಲ ಜನತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ನಾನೂ ಕೂಡಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಬಳಿಕ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂದು ಬಿಜೆಪಿ ನಾಯಕರು ಕೇವಲ ಭಾಷಣ ಮಾಡಿ, ಕಥೆ ಕಾದಂಬರಿ ಹೇಳಿ ಹೋಗಬಾರದು, ನೂರ ಜನ ಶಾಸಕರನು ಕೂಡಿ ಹಾಕುವ ಬದಲು, ಅದೇ ನೂರ ಜನ ಶಾಸಕರನ್ನು ಕರೆದುಕೊಂಡು ಹೋಗಿ ಶ್ರೀಗಳಿಗೆ ಭಾರತರತ್ನ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಇದೇ ಜನವರಿ 26 ರಂದು ಭಾರತರತ್ನ ಕೊಡಬೇಕು. ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕೊಟ್ಟರೆ, ಪ್ರಶಸ್ತಿಗೆ ಮತ್ತಷ್ಟು ಬೆಲೆ ಬರಲಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *