ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ

Public TV
1 Min Read

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್-8 ಸ್ಫರ್ಧಿಯಾಗಿದ್ದ ವೈಷ್ಣವಿ ಗೌಡ ಈ ಬಾರಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

ಬಿಗ್‍ಬಾಸ್ ಸೀನಸ್-8ರಲ್ಲಿ ತಮ್ಮ ತರ್ಲೆ ಹಾಗೂ ಚೇಷ್ಟೆ ಮೂಲಕ ಮಂಜುರನ್ನು ಸದಾ ಗೋಳುಯ್ದುಕೊಳ್ಳುತ್ತಿದ್ದ ವೈಷ್ಣವಿ ಗೌಡ ದೊಡ್ಮನೆ ಮಂದಿಗಷ್ಟೇ ಅಲ್ಲದೇ ವೀಕ್ಷಕರಿಗೂ ಫೇವರೆಟ್ ಕಂಟೆಸ್ಟೆಂಟ್ ಅಂದರೆ ತಪ್ಪಾಗಲಾರದು. ಬಿಗ್‍ಬಾಸ್ ಮನೆಯಲ್ಲಿ ತಮ್ಮ ನಡೆ, ನುಡಿ, ಹಾವ-ಭಾವ ಮೂಲಕ ಕನ್ನಡಿಗರ ಹೃದಯ ಕದ್ದಿದ್ದ ಚೆಲುವೆ ವೈಷ್ಣವಿಗೌಡ. ಬಿಗ್‍ಬಾಸ್ ಕಾರ್ಯಕ್ರಮದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಷಿವ್ ಆಗಿರುವ ವೈಷ್ಣವಿ ಗೌಡ ಇತ್ತೀಚೆಗಷ್ಟೇ ಕಡಲೆಕಾಯಿ ಪರಿಷೆಯಲ್ಲಿ ಮಸ್ತ್ ಮಜಾ ಮಾಡಿದ್ದಾರೆ.

ಸದ್ಯ ಕಡಲೆ ಕಾಯಿ ಪರಿಷೆಯ ಕಲರ್ ಫುಲ್ ವೀಡಿಯೋವೊಂದನ್ನು ವೈಷ್ಣವಿ ಗೌಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ವೈಷ್ಣವಿ ಜಾತ್ರೆಯಲ್ಲಿ ಆಟ ಆಡಿರುವುದು, ಅಭಿಮಾನಿಗಳು ಹಾಗೂ ಪೊಲೀಸರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿವುದು, ದೊಡ್ಡ ಗಣೇಶ ದೇವಾಲಯಕ್ಕೆ ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಸಿಂಪಲ್ ಮ್ಯಾರೇಜ್ – ಮದುವೆ ಪ್ಲ್ಯಾನ್ ಬಗ್ಗೆ ಶುಭಾ ಪೂಂಜಾ ಮಾತು

ವೀಡಿಯೋ ಜೊತೆಗೆ ಸಂಪ್ರದಾಯಿಕ ಹಿರಿಮೆ, ಆಚರಣೆ, ಜನ, ಬಣ್ಣ, ಬಣ್ಣದ ದೃಶ್ಯ ಎಲ್ಲವೂ ಅದ್ಭುತ ಅನುಭವ ತರಿಸಿದೆ. ಈ ವರ್ಷ ಕಡಲೆಕಾಯಿ ಪರಿಷೆಯಲ್ಲಿ ನಾನು ಭಾಗಿಯಾಗಿದ್ದು ಬಹಳ ಸಂತಸ ತಂದಿದೆ. ಮೊದಲ ಬಾರಿಗೆ ಕಡಲೆ ಕಾಯಿ ಪರಿಷೆ ವೀಕ್ಷಿಸಿದೆ ಎಂದು ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by Vaishnavi (@iamvaishnavioffl)

ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಜಾತ್ರೆಯಂತಿರುವ ಕಡಲೆಕಾಯಿ ಪರಿಷೆ ವೀಕ್ಷಿಸಲು ಬೆಂಗಳೂರಿನ ಮೂಲೆ ಮೂಲೆಗಲಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಈ ಮಧ್ಯೆ ಮೊದಲ ಬಾರಿಗೆ ಕಡಲೆ ಕಾಯಿ ಪರಿಷೆ ವೀಕ್ಷಿಸಿದ ವೈಷ್ಣವಿ ಗೌಡ ಸಖತ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

Share This Article
Leave a Comment

Leave a Reply

Your email address will not be published. Required fields are marked *