‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

Public TV
1 Min Read

ಲಕ್ನೋ: ಮರಣ ಪ್ರಮಾಣ ಪತ್ರದಲ್ಲಿ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಊರಿನ ಮುಖ್ಯಸ್ಥನೋರ್ವ ಬರೆದಿರುವ ಡೆತ್ ಸರ್ಟಿಫಿಕೇಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಿರ್ವರಿಯಾ ಎಂಬ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ವೃದ್ಧ ಲಕ್ಷ್ಮಿ ಶಂಕರ್ ಕಳೆದ ತಿಂಗಳ ಜನವರಿ 22 ರಂದು ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು. ಇವರ ಡೆತ್ ಸರ್ಟಿಫಿಕೇಟ್ ನೀಡಿದ ಗ್ರಾಮದ ಮುಖ್ಯಸ್ಥ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಬರೆದ್ದಾನೆ.

ಲಕ್ಷ್ಮಿ ಶಂಕರ್ ಸಾವಿನ ನಂತರ ಅವರ ಮಗ ಯಾವುದೋ ಅರ್ಥಿಕ ವಹಿವಾಟಿಗೆ ಬೇಕೆಂದು ಮರಣ ಪ್ರಮಾಣ ಪತ್ರ ಪಡೆಯಲು ಗ್ರಾಮದ ಮುಖ್ಯಸ್ಥ ಬಾಬುಲಾಲ್ ಬಳಿ ಹೋಗಿದ್ದಾರೆ. ಈ ವೇಳೆ ಮರಣ ಪ್ರಮಾಣ ಪತ್ರವನ್ನು ಬರೆದುಕೊಟ್ಟಿರುವ ಬಾಬುಲಾಲ್, ಕೊನೆಯುಲ್ಲಿ ನಾನು ಸಾವನ್ನಪ್ಪಿದ ವ್ಯಕ್ತಿಗೆ ಉಜ್ವಲ ಭವಿಷ್ಯವಿರಲಿ ಎಂದು ಬಯಸುತ್ತೇನೆ ಎಂದು ಹಿಂದಿಯಲ್ಲಿ ಬರೆದುಕೊಟ್ಟಿದ್ದಾನೆ.

ಬಾಬುಲಾಲ್ ಬರೆದುಕೊಟ್ಟಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವನ್ನು ತಿಳಿದ ಬಾಬುಲಾಲ್ ಮತ್ತೆ ಲಕ್ಷ್ಮಿ ಶಂಕರ್ ಪುತ್ರನನ್ನು ವಾಪಸ್ ಕರೆಸಿ ಕ್ಷೆಮೆ ಕೇಳಿ ಹೊಸ ಮರಣ ಪ್ರಮಾಣ ಪತ್ರವನ್ನು ಬರೆದು ಕೊಟ್ಟುಕಳುಹಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *