-ಕಬ್ಬಡ್ಡಿಯ ಮಿಂಚು ಕನ್ನಡದ ಕುವರಿ ಉಷಾರಾಣಿ
ಬೆಂಗಳೂರು: ಪ್ರಸಕ್ತ ಸಾಲಿನ ಏಷ್ಯಾನ್ ಗೇಮ್ಸ್ನಲ್ಲಿ ಭಾರತ ಮಹಿಳಾ ಕಬ್ಬಡ್ಡಿ ತಂಡವನ್ನು ಪ್ರತಿನಿಧಿಸಿ ಸಿಲ್ವರ್ ಮೆಡಲ್ ಪಡೆದ ಕನ್ನಡದ ಕುವರಿ ಉಷಾರಾಣಿಯ ಸಂಪೂರ್ಣ ವರದಿ ಇಲ್ಲಿದೆ.
ಯಶವಂತಪುರ ನಿವಾಸಿ ಉಷಾರಾಣಿ ಅವರು ತಂಡ ಪ್ರತಿನಿಧಿಸಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವ ವಿಚಾರವಾಗಿದೆ. ನರಸಿಂಹಯ್ಯ ಮತ್ತು ಪುಟ್ಟಮ್ಮನವರ ದಂಪತಿಯ ಎರಡನೇ ಪುತ್ರಿ. ಕಳೆದ 12 ವರ್ಷಗಳಿಂದ ಕಬ್ಬಡ್ಡಿಯಲ್ಲೇ ಜೀವನ ಕಂಡುಕೊಂಡಿರುವ ಉಷಾರಾಣಿ ಕರ್ನಾಟಕದ ತಂಡದ ಪ್ರತಿನಿಧಿಯಾಗಿ ಹಲವಾರು ಪಂದ್ಯಗಳನ್ನ ಆಡಿ ರಾಷ್ಟ್ರಮಟ್ಟದಲ್ಲಿ ಎರಡು ಬಾರಿ ಪ್ರತಿನಿಧಿಸಿದ್ದಾರೆ.
ಶನಿವಾರ ನಡೆದ ಏಷ್ಯಾನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಪಡೆದಿರೋದು ಪೋಷಕರಲ್ಲಿ ಸಂಭ್ರಮ ಮನೆಮಾಡಿದೆ. ವಲ್ರ್ಡ್ ಕಪ್ನಲ್ಲಿಯೂ ಮಗಳು ಭಾಗವಹಿಸಿ ಜಯಗಳಿಸಬೇಕೆಂಬ ಎಂಬುವುದು ನಮ್ಮ ಆಸೆ ಎಂದು ತಾಯಿ ಪುಟ್ಟಮ್ಮ ಹೇಳುತ್ತಾರೆ.
ಉಷಾರಾಣಿಯವರು ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿದ್ದು, ಇಲಾಖೆಯ ಪ್ರೋತ್ಸಾಹದಿಂದಲೇ ಹಲವಾರು ಟೂರ್ನಿಗಳಲ್ಲಿ ಭಾಗವಹಿಸಿ ಜಯಗಳಿಸಿದ್ದಾರೆ. ಅಷ್ಟೇ ಅಲ್ಲದೇ ಉಷಾ ರಾಣಿಯವರಿಗೆ ಇಬ್ಬರು ತಮ್ಮಂದಿರು ಮೂವರು ತಂಗಿಯರಿದ್ದು ಅವರು ಸಹ ಕಬ್ಬಡ್ಡಿ ಆಟಗಾರರಾಗಿದ್ದಾರೆ. ತಮ್ಮ ಅಕ್ಕನ ಪ್ರತಿಭೆಯನ್ನು ಕಂಡು ಸ್ಫೂರ್ತಿಯಾಗಿ ಟೂರ್ನಿಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಸಿದ್ದಾರೆ. ಆದರೆ ಇಂದು ಅಕ್ಕನ ಸಾಧನೆಯನ್ನ ಕಂಡು ಸಂತಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv