ಕುತ್ತಿಗೆಗೆ ಸುತ್ತಿಕೊಂಡು ಓಡಾಡ್ತಿದ್ದ ವೇಳೆ ಉರಗ ರಕ್ಷಕನನ್ನೇ ಕಚ್ಚಿ ಕೊಂದ ಹಾವು

Public TV
1 Min Read

ಲಕ್ನೋ: ಹಾವನ್ನು ರಕ್ಷಿಸಿದ ನಂತರ ಕುತ್ತಿಗೆಗೆ ಸುತ್ತಿಕೊಂಡು ಊರೆಲ್ಲಾ ಓಡಾಡುತ್ತಿದ್ದ ಉರಗ ರಕ್ಷಕನನ್ನು ಕಚ್ಚಿ ಕೊಂದಿರುವ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

SNAKE
ಸಾಂದರ್ಭಿಕ ಚಿತ್ರ

ಮೃತ ವ್ಯಕ್ತಿಯನ್ನು ಉರಗ ರಕ್ಷಕ ದೇವೇಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಈತ ನೆರೆಹೊರೆಯಲ್ಲಿ ಹಾವನ್ನು ಹಿಡಿಯುತ್ತಾ ಫೇಮಸ್ ಆಗಿದ್ದ. ಹಾಗೆಯೇ ಅತ್ಯಂತ ವಿಷಕಾರಿ ಹಾವನ್ನು ಇಂದು ರಕ್ಷಿಸಿದ್ದಾನೆ. ಬಳಿಕ ಕುತ್ತಿಗೆಗೆ ಸುತ್ತಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿದ್ದಾನೆ. ಇದೇ ವೇಳೆ ಹಾವು ಕಚ್ಚಿದೆ. ಇದನ್ನೂ ಓದಿ: ಜೈಪುರ ಕ್ಯಾಸಿನೊ ಪ್ರಕರಣ- ಕೋಲಾರದ PSI ಆಂಜಪ್ಪ ಅಮಾನತು

ಹಿಡಿದು ಸುಮಾರು 2 ಗಂಟೆಗಳಾದ ನಂತರ ಹಾವು ಕಚ್ಚಿದೆ. ಆದರೆ ಉರಗ ರಕ್ಷಕ ಆಸ್ಪತ್ರೆಗೆ ಹೋಗುವ ಬದಲಾಗಿ ಗಿಡಮೂಲಿಕೆಗಳಿಂದ ಚಿಕಿತ್ಸೆ ಪಡೆದಿದ್ದಾನೆ. ನಂತರ ಏನೂ ಆಗಿಲ್ಲವೆಂದು ಭಾವಿಸಿ ಸುಮ್ಮನಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *