ತನ್ನ ವಿರುದ್ಧ ತಾನೇ ದೂರು ದಾಖಲಿಸಿಕೊಂಡ ಪೊಲೀಸ್ !

Public TV
1 Min Read

ಲಕ್ನೋ: ಉತ್ತರ ಪ್ರದೇಶದ ಮೀರತ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಮ್ಮ ಮತ್ತು ಕೆಲ ಠಾಣೆಯ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಮೀರತ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ಈ ರೀತಿ ತಮ್ಮ ವಿರುದ್ಧ ತಾವೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗೋ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ವಿಫಲವಾಗಿದ್ದಕ್ಕೆ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಖಾರ್ಕೋಡ ಪೊಲೀಸ್ ಠಾಣೆ ಉಸ್ತುವಾರಿ ತೆಗೆದುಕೊಳ್ಳುವ ಮೊದಲು, ತಪ್ಪು ಕ್ರಮ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಒಂದು ನಿಯಮವನ್ನು ರೂಪಿಸಿದ್ದರು. ಒಂದು ಅಪರಾಧದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಅದನ್ನು ಕಾನ್ಸ್ ಸ್ಟೇಬಲ್ ಜವಾಬ್ದಾರಿ ಹೊಂದುತ್ತಾರೆ ಎಂಬ ಪರಿಕಲ್ಪನೆಯನ್ನು ಮಾಡಿದ್ದೆವು. ಅದೇ ರೀತಿ ಆ ಕಾನ್ಸ್ ಸ್ಟೇಬಲ್ ಸಂಬಂಧಪಟ್ಟ ಪ್ರದೇಶದಲ್ಲಿ ಯಾವುದೇ ಕಳ್ಳತನ ಅಥವಾ ಕೊಲೆ ಆದರೆ ಅದರ ಹೊಣೆಗಾರಿಕೆ ಆ ಕಾನ್ಸ್ ಸ್ಟೇಬಲ್ ಮೇಲಿರುತ್ತದೆ ಎಂದು ತ್ಯಾಗಿ ಹೇಳಿದ್ದಾರೆ.

ಒಂದು ವೇಳೆ ಆ ಕಾನ್ಸ್ ಸ್ಟೇಬಲ್ ವಿರುದ್ಧ ಎರಡಕ್ಕಿಂತ ಅಧಿಕವಾಗಿ ನಿರ್ಲಕ್ಷ್ಯ ಕರ್ತವ್ಯ ದೂರು ದಾಖಲಾದರೆ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈವರೆಗೆ ಒಟ್ಟು ಆರು ಪೋಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ದೂರುಗಳನ್ನು ಸಲ್ಲಿಸಿದೆ. ಇನ್ನು 19 ಮಂದಿ ವಿರುದ್ಧ ಲಂಚ ತೆಗೆದುಕೊಳ್ಳುವ ಹಿಂಸಾಚಾರದಲ್ಲಿ ಮೊಕದ್ದಮೆ ಹೂಡಲಾಗಿದೆ ಅಂತ ವಿವರಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *