Uttar Pradesh | ಮತದಾರರಿಗೆ ಬೆದರಿಕೆ ಆರೋಪ – 7 ಜನ ಪೊಲೀಸರ ಅಮಾನತು

Public TV
1 Min Read

ಲಕ್ನೋ: ಉತ್ತರ ಪ್ರದೇಶದ (Uttar Pradesh) ಉಪಚುನಾವಣೆಯಲ್ಲಿ (UP By Election) ಮತದಾರರ ಗುರುತಿನ ಚೀಟಿ ಪರೀಕ್ಷಿಸಿ ಮತ್ತು ಮತದಾನ ಮಾಡದಂತೆ ತಡೆದ ಆರೋಪದ ಮೇಲೆ 7 ಜನ ಪೊಲೀಸರ (Police) ಅಮಾನತು ಅಮಾನತು ಮಾಡಲಾಗಿದೆ.

ಉತ್ತರ ಪ್ರದೇಶದ 9 ಸ್ಥಾನಗಳಿಗಾಗಿ ನಡೆದ ಉಪಚುನಾವಣೆಯಲ್ಲಿ ಹಲವು ಸ್ಥಳಗಳಲ್ಲಿ ಪೊಲೀಸರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಈ ಸಂಬಂಧ ದೂರಿನ ಅಡಿ ಚುನಾವಣಾ ಆಯೋಗವು (Election Commission) 7 ಪೊಲೀಸರನ್ನು ಅಮಾನತುಗೊಳಿಸಿದೆ.

ಸಿಸಾಮಾವ್‌ನಲ್ಲಿ ಇಬ್ಬರು ಇನ್ಸ್‌ಪೆಕ್ಟರ್‌ಗಳಾದ ಅರುಣ್ ಸಿಂಗ್ ಮತ್ತು ರಾಕೇಶ್ ನಾಡರ್ ಅವರನ್ನು ಮತದಾರರೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.

ಕಾನ್ಪುರದಲ್ಲಿ ಐವರು ಪೊಲೀಸರ ಅಮಾನತು
ಕಾನ್ಪುರ ಪೊಲೀಸ್ ಕಮಿಷನರ್ ಅಖಿಲ್ ಕುಮಾರ್ ಮಾಹಿತಿ ನೀಡಿ, ಕೆಲವು ಪೊಲೀಸರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂಬ ಮಾಹಿತಿ ನಮಗೆ ಬಂದಿದೆ. ಈ ಸಂಬಂಧ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಚುನಾವಣೆ ರದ್ದಿಗೆ ಎಸ್‌ಪಿ ಆಗ್ರಹ
ಇದೇ ವೇಳೆ, ಎಸ್‌ಪಿ ಅಭ್ಯರ್ಥಿ ಹಾಜಿ ರಿಜ್ವಾನ್ ಕೂಡ ಕುಂದರ್ಕಿ ಉಪಚುನಾವಣೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಚುನಾವಣೆ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

Share This Article