ಅಪರಿಚಿತ ವಾಹನ ಡಿಕ್ಕಿ ಹೊಡೆದು ಗುರುತು ಹಿಡಿಯಲಾಗದಷ್ಟು ವ್ಯಕ್ತಿ ಛಿದ್ರ ಛಿದ್ರ!

Public TV
1 Min Read

ಬೆಂಗಳೂರು: ಅಪರಿಚಿತ ವಾಹನವೊಂದು ವ್ಯಕ್ತಿಯೊರ್ವನಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಮೃತನ ದೇಹ ಛಿದ್ರವಾಗಿ ಬಿದ್ದಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲದ ಕೆರೆಕತ್ತಿಗನೂರು ಕ್ರಾಸ್ ಬಳಿ ಈ ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿ ಭಿಕ್ಷುಕ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನೂ ತಡರಾತ್ರಿ ಅಪಘಾತ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ರಸ್ತೆ ಪಕ್ಕದಲ್ಲಿ ಛಿದ್ರವಾಗಿ ಬಿದ್ದಿರುವ ವ್ಯಕ್ತಿ ಸುಮಾರು 45 ವರ್ಷದವರು ಎಂದು ಹೇಳಲಾಗಿದ್ದು, ಮೃತ ದೇಹ, ಗುರುತು ಪತ್ತೆಯಾಗದಷ್ಟು ದೇಹ ವಿರೂಪಗೊಂಡಿದೆ. ಮೃತ ದೇಹದ ಮೇಲೆ ಭಾರಿ ವಾಹನಗಳು ಸಂಚರಿಸಿರುವುದರಿಂದ ಗುರುತು ಪತ್ತೆಯಾಗದಷ್ಟು ದೇಹ ವಿರೂಪಗೊಂಡಿದೆ.

ಸದ್ಯ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *