ಸಿದ್ದು ಸರ್ಕಾರ ಮುಂದುವರಿದ್ರೆ ಮುಂದೆ ಉಗ್ರ ಕಸಬ್ ಜಯಂತಿ ಆಚರಣೆ: ಅನಂತ್ ಕುಮಾರ್ ಹೆಗಡೆ

Public TV
1 Min Read

ಉಡುಪಿ: ಹಠಮಾಡಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿದರು. ಇದೇ ಸರ್ಕಾರ ರಾಜ್ಯದಲ್ಲಿ ಮುಂದುವರೆದರೆ ಉಗ್ರ ಕಸಬ್ ಜಯಂತಿಯನ್ನೂ ಆಚರಿಸುತ್ತಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಪರಿವರ್ತನಾ ಯಾತ್ರೆಯ ಕುಂದಾಪುರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ನಾಡು ನುಡಿಯ ಕಲ್ಪನೆಯಿಲ್ಲ. ಟಿಪ್ಪು ಜಯಂತಿಯನ್ನು ಹಠಮಾಡಿ ಆಚರಣೆ ಮಾಡಿದರು. ಇದೇ ರೀತಿ ಸಿದ್ದರಾಮಯ್ಯ ಸರ್ಕಾರ ಮುಂದುವರೆದರೆ ಕಸಬ್ ಜಯಂತಿಯನ್ನು ಆಚರಿಸುತ್ತಾರೆ. ಇವರು ದೇಶದ್ರೋಹಿಗಳ ಜಯಂತಿಯನ್ನೂ ಆಚರಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.

ನಾವು ಸ್ವಾಭಿಮಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಅಭಿವೃದ್ಧಿಯ ಜೊತೆ ರಕ್ತಕ್ಕೆ ಗೌರವ ಕೊಡುವ ಸರ್ಕಾರ ನಮಗೆ ಬೇಕು. ದೇಶದ್ರೋಹಿಗಳ ಓಟೇ ಕಾಂಗ್ರೆಸ್ಸಿಗೆ ಬೇಕು ಎಂದು ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಬೇಕು. ಭಗವಾಧ್ವಜದ ನೇತೃತ್ವದಲ್ಲಿ ಧರ್ಮರಾಜ್ಯ ನಿರ್ಮಾಣವಾಗಬೇಕು. ರಾವಣರಾಜ್ಯ ಹೋಗಬೇಕು ರಾಮರಾಜ್ಯ ನಿರ್ಮಾಣ ಆಗಬೇಕು. ಸಿದ್ದರಾಮಯ್ಯ ಅವರ ದುರಹಂಕಾರಿ ಆಡಳಿತ ಕೊನೆಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

 

Share This Article
Leave a Comment

Leave a Reply

Your email address will not be published. Required fields are marked *