ಬಜೆಟ್ 2017: ಜನರ ನಿರೀಕ್ಷೆಗಳೇನು?

Public TV
5 Min Read

ನೋಟ್ ಬ್ಯಾನ್ ಮಾಡಿದ ಬಳಿಕ ಮೋದಿ ಸರ್ಕಾರದ ಬಜೆಟ್ ಮೇಲೆ ಜನರಿಗೆ ಭಾರೀ ನಿರೀಕ್ಷೆ ಇದೆ. ಹಾಗಾದ್ರೆ ಮೋದಿ ಡ್ರೀಮ್ ಬಜೆಟ್‍ನಲ್ಲಿ ಅರುಣ್ ಜೇಟ್ಲಿ ಅವರಿಂದ ಜನರ ನಿರೀಕ್ಷೆಗಳೇನಿರಬಹುದು ಎಂಬುದರ ವಿವರ ಇಲ್ಲಿದೆ.

ಜಿಎಸ್‍ಟಿ ಬಜೆಟ್
– ಒಂದೇ ರಾಷ್ಟ್ರ, ಒಂದೇ ತೆರಿಗೆಗೆ ಬಜೆಟ್‍ನಲ್ಲಿ ಮೊದಲ ಒತ್ತು
– ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿ
– ಬಜೆಟ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟ ನಕಾಶೆ ಸಿದ್ಧ
– ಕೇಂದ್ರ ಸರ್ಕಾರ-ರಾಜ್ಯ ಸರ್ಕಾರಗಳ ನಡುವೆ ತೆರಿಗೆಗಳ ಹಂಚಿಕೆ
– ಜಿಎಸ್‍ಟಿ ಜಾರಿಯಿಂದ ರಾಜ್ಯಗಳಿಗಾಗುವ ನಷ್ಟ ಭರಿಸಲು ಸಂಪನ್ಮೂಲ ಕ್ರೋಢೀಕರಣ

– ಜಿಎಸ್‍ಟಿ ಜಾರಿಯಾಗಬಹುದಾದ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಹೆಚ್ಚಳ
– ಶೇಕಡಾ 16-18ರ ನಡುವೆ ಸೇವಾ ತೆರಿಗೆ ವಿಧಿಸುವ ಸಾಧ್ಯತೆ
– ಹೋಟೆಲ್, ಮನರಂಜನೆ, ಔಟಿಂಗ್ ದುಬಾರಿಯಾಗುವುದು ನಿಶ್ಚಿತ
– ಸಿಗರೇಟ್, ಸ್ಪೋಟ್ರ್ಸ್ ಯುಟಿಲಿಟಿ ವಾಹನಗಳು ಮತ್ತಷ್ಟು ದುಬಾರಿ

– ಆಹಾರ ಪದಾರ್ಥಗಳಿಗೆ ಜಿಎಸ್‍ಟಿಯಿಂದ ವಿನಾಯಿತಿ
– ಚಿನ್ನದ ಮೇಲಿನ ಕಸ್ಟಂ ಸುಂಕ ಇಳಿಕೆ ಸಾಧ್ಯತೆ

ಆದಾಯ ತೆರಿಗೆ
– ವಿನಾಯಿತಿ ಮಿತಿಯನ್ನು ಕನಿಷ್ಠ 4 ಲಕ್ಷಕ್ಕೆ ಏರಿಸಬೇಕು
– ಪ್ರಸ್ತುತ 2.50 ಲಕ್ಷ ರೂ. ವಿನಾಯಿತಿ ಇದೆ
– ಗೃಹ ಸಾಲಗಳಿಗೆ ಪಾವತಿಸುವ ಬಡ್ಡಿ ವಿನಾಯಿತಿ ಮಿತಿಯನ್ನು 1.50 ಲಕ್ಷದಿಂದ 3 ಲಕ್ಷಕ್ಕೆ ಏರಿಸಬೇಕು
– ಸೆಕ್ಷನ್80 ಸಿ ಅಡಿ 1.5 ಲಕ್ಷದವರೆಗೆ ಇರುವ ತೆರಿಗೆ ಕಡಿತ ಮಿತಿಯನ್ನು ಕನಿಷ್ಠ 3 ಲಕ್ಷಕ್ಕೆ ಹೆಚ್ಚಿಸುವುದು

– ಎನ್‍ಪಿಎಸ್ [ನ್ಯಾಷನಲ್ ಪೆನ್ಷನ್ ಸ್ಕೀಮ್]ಗೆ ತೆರಿಗೆ ವಿನಾಯಿತಿ
– ಈಗ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಿಂಪಡೆದ ಹಣಕ್ಕೆ ಶೇ.60 ತೆರಿಗೆ ಇದೆ
– ಪಿಎಫ್‍ಗೆ ಹೋಲಿಸಿದರೆ ಇದು ದುಬಾರಿ
– ಜೊತೆಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು
– ಕಾರ್ಪೋರೇಟ್ ತೆರಿಗೆ ಇಳಿಕೆ ಸಾಧ್ಯತೆ

ಗೃಹ
– ಮನೆ ಬಾಡಿಗೆ, ವೈದ್ಯಕೀಯ ಸೇವೆ ಇತ್ಯಾದಿ ಅಂಶಗಳು ಹಿಂದೆ ನಿಗದಿಯಾಗಿದ್ದು ಇವುಗಳ ಮಿತಿಯನ್ನು ಹೆಚ್ಚಿಸಬೇಕು
– ಎಚ್‍ಆರ್‍ಎ ಮಿತಿ ಕಳೆದ ಬಜೆಟ್‍ನಲ್ಲಿ 24 ಸಾವಿರದಿಂದ 60 ಸಾವಿರಕ್ಕೆ ಏರಿಸಲಾಗಿತ್ತು. ಈ ಮಿತಿಯನ್ನು ಮತ್ತಷ್ಟು ಏರಿಸಬೇಕು
– ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆಯಡಿ ವಸತಿ ಯೋಜನೆಗೆ ಒತ್ತು
– 9 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಶೇಕಡಾ 3ರಷ್ಟು ಬಡ್ಡಿ ವಿನಾಯಿತಿ
– 12 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇಕಡಾ 4ರಷ್ಟು ಬಡ್ಡಿ ವಿನಾಯಿತಿ

ಕ್ಯಾಶ್‍ಲೆಸ್‍ಗೆ ಉತ್ತೇಜನ
– ನಗದು ರಹಿತ ಅರ್ಥವ್ಯವಸ್ಥೆಗೆ ಅರುಣ್ ಜೇಟ್ಲಿ ಬಜೆಟ್‍ನಲ್ಲಿ ಪ್ರಮುಖ ಆದ್ಯತೆ
– ಕಾರ್ಡ್ ಪೇಮೆಂಟ್, ಟೋಲ್ ಪಾವತಿಗೆ ಡಿಸ್ಕೌಂಟ್
– ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರದ ಬೆಲೆ ಕಡಿಮೆಯಾಗಬೇಕು (ಈಗ ಒಂದು ಯಂತ್ರದ ಬೆಲೆ 8 ಸಾವಿರ ರೂ. ಇದೆ)
– ಡಿಜಿಟಲ್ ವ್ಯಾಲೆಟ್ ಬಳಕೆಗೆ ವಿಶೇಷ ವಿಮೆ ಸೌಲಭ್ಯ
– ಬ್ಯಾಂಕ್‍ನಿಂದ 50 ಸಾವಿರ ರೂಪಾಯಿಗಿಂತ ಹೆಚ್ಚು ಡ್ರಾ ಮಾಡಿದರೆ ತೆರಿಗೆ
– ದೊಡ್ಡ ಮೊತ್ತದ ವ್ಯವಹಾರಗಳಲ್ಲಿ ನಗದು ಚಲಾವಣೆ ಮೇಲೆ ಸಂಪೂರ್ಣ ನಿರ್ಬಂಧ
– ಸ್ಮಾರ್ಟ್‍ಫೋನ್ ಖರೀದಿಗೆ ಸಣ್ಣ ವ್ಯಾಪಾರಸ್ಥರಿಗೆ 1 ಸಾವಿರ ರೂಪಾಯಿ ಸಬ್ಸಿಡಿ
– ಸರ್ಕಾರಿ ಸಂಸ್ಥೆಗಳಿಗೆ ಡಿಜಿಟಲ್ ಮೂಲಕವಷ್ಟೇ ಪಾವತಿಗೆ ಅವಕಾಶ
– ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸಮಿತಿ ಶಿಫಾರಸ್ಸಿಗೆ ಬಜೆಟ್‍ನಲ್ಲಿ ಸ್ಥಾನ

ಆಧಾರ್/ಪ್ಯಾನ್ ಕಾರ್ಡ್
– 50 ಸಾವಿರ ರೂಪಾಯಿಗಿಂತ ಮೇಲ್ಪಟ್ಟ ಖರೀದಿಗೆ ಪ್ಯಾನ್ ಕಡ್ಡಾಯ
– ಈಗಿರುವ 2 ಲಕ್ಷ ರೂಪಾಯಿ ಮಿತಿ 50 ಸಾವಿರಕ್ಕೆ ಇಳಿಕೆ
– ಪ್ಯಾನ್ ಅಥವಾ ಆಧಾರ್ ಕಾರ್ಡ್ ದಾಖಲೆ ನೀಡಿದರಷ್ಟೇ ಖರೀದಿಗೆ ಅವಕಾಶ
– ಚಿನ್ನ ಖರೀದಿಗೂ ಪ್ಯಾನ್, ಆಧಾರ್ ಕಡ್ಡಾಯಗೊಳಿಸಲಿರುವ ಕೇಂದ್ರ ಸರ್ಕಾರ
– ರೈಲ್ವೆಯಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್‍ಗೆ ಆಧಾರ್ ಕಾರ್ಡ್ ಕಡ್ಡಾಯ

ಕೃಷಿ/ ರೈತ
– ಬರದಿಂದ ಕಂಗೆಟ್ಟ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ
– ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಹಣ ಒದಗಿಸಬೇಕು
– ಸಾಲ ಪಾವತಿ ಮಾಡಲು ಅವಧಿ ವಿಸ್ತರಣೆ
– ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ
– ಕೃಷಿ ಕ್ಷೇತ್ರಕ್ಕೆ ಅರುಣ ಆಯ್ಯವ್ಯಯದಲ್ಲಿ ಬಂಪರ್
– ಸಾಲ ವಿತರಣೆ ಗುರಿ 9 ಲಕ್ಷ ಕೋಟಿ ರೂ. ನಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಳ
– ಬೆಳೆ ವಿಮೆ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ನಿಧಿ

ರಿಯಲ್ಟಿ ಕ್ಷೇತ್ರ
– ರಿಯಾಲ್ಟಿ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು
– ಸ್ಥಾನ ನೀಡದೇ ಇದ್ದ ಕಾರಣ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದಾರೆ
– ಮನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ
– ಅಗ್ಗದ ದರದಲ್ಲಿ ಗೃಹ ನಿರ್ಮಾಣಕ್ಕೆ ತೆರಿಗೆ ವಿನಾಯಿತಿ ಘೋಷಣೆ ಸಾಧ್ಯತೆ

ಎಫ್‍ಎಂಸಿಜಿ
– ನೋಟ್ ನಿಷೇಧದಿಂದಾಗಿ ಎಫ್‍ಎಂಸಿಜಿಗೆ ಹೊಡೆತ ಬಿದ್ದಿದೆ
– ಎಫ್‍ಎಂಸಿಜಿ ಕ್ಷೇತ್ರ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು

ಅಟೋಮೊಬೈಲ್
– ನೋಟ್ ಬ್ಯಾನ್ ಬಳಿಕ ಭಾರೀ ಹೊಡೆತ ಬಿದ್ದಿದೆ
– ಎಸ್‍ಯುವಿ ಖರೀದಿ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕು
– ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾರು ದರ ದುಬಾರಿ ಸಾಧ್ಯತೆ

ಸ್ಟಾರ್ಟ್ ಅಪ್ ಕಂಪೆನಿ
– ಕನಿಷ್ಠ 5 ವರ್ಷ ತೆರಿಗೆ ವಿನಾಯಿತಿ ಘೋಷಿಸಬೇಕು
– ಈಗ ಮೊದಲ 3 ವರ್ಷ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ

ವಿದ್ಯಾರ್ಥಿಗಳು
– ಉನ್ನತ ಶಿಕ್ಷಣದ ಶುಲ್ಕ ಕಡಿಮೆಯಾಗಬೇಕು (ಎಂಬಿಬಿಎಸ್, ಐಐಟಿ ಇತ್ಯಾದಿ)
– ಗ್ಯಾಜೆಟ್‍ಗಳ ಬೆಲೆ ಕಡಿಮೆ ಆಗಬೇಕು
– ಸ್ಕಾಲರ್‍ಶಿಪ್ ಹಣ ಜಾಸ್ತಿ ಮಾಡಬೇಕು

ಮಹಿಳೆಯರು
– ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಬೇಕು
– ಎಲ್‍ಪಿಜಿ ಬೆಲೆ ಇಳಿಕೆಯಾಗಬೇಕು
– ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚಿನ ಬಡ್ಡಿ ನೀಡಬೇಕು

ರೈಲು
– ರೈಲು ಖಾಸಗೀಕರಣಕ್ಕೆ ಈ ಬಾರಿ ಪ್ರಮುಖ ಒತ್ತು
– ಖಾಸಗಿ ವಲಯದ ಜೊತೆ ಸೇರಿ ಹಳಿ, ಸ್ಟೇಷನ್‍ಗಳ ಅಭಿವೃದ್ಧಿ
– ಹಳಿಗಳ ಮೇಲೆ ಓಡಲಿದೆ ಖಾಸಗಿ ಕಂಪನಿಗಳ ರೈಲು
– ವಿಮಾನಯಾನ ಮಾದರಿಯಲ್ಲೇ ಖಾಸಗಿ ರೈಲು ಓಡಾಟಕ್ಕೆ ಅನುಮತಿ
– ಇಂಟರ್ ಸಿಟಿ ರೈಲು ಸೇವೆಯನ್ನು ಆರಂಭಿಸಬೇಕು
– ಹೆಚ್ಚು ಪ್ರಯಾಣಿಕರು ಸಂಚರಿಸುವ ಕಡೆ ಹಳಿ ಡಬ್ಲಿಂಗ್
– ನಗರ ಅಲ್ಲದೇ ಇತರ ರೈಲ್ವೇ ನಿಲ್ದಾಣಗಳಲ್ಲೂ ವೈಫೈ ವ್ಯವಸ್ಥೆ
– ದೇಶದ ಎಲ್ಲ ಜಿಲ್ಲೆಗಳಲ್ಲಿ ರೈಲು ಸಂಚರಿಸಬೇಕು (ಸದ್ಯ ಕೊಡಗಿಗೆ ರೈಲಿಲ್ಲ)
– ಸಬ್ಸಿಡಿ ದರದಲ್ಲಿ ಟಿಕೆಟ್ ಸೌಲಭ್ಯ ಬಹುತೇಕ ಕೊನೆ

ಪೆಟ್ರೋಲ್/ಡೀಸೆಲ್/ ಗ್ಯಾಸ್
– ಅರುಣ್ ಜೇಟ್ಲಿ ಬಜೆಟ್‍ಗೆ ಕಚ್ಚಾತೈಲ ದರ ಏರಿಕೆ ಗ್ರಹಣ
– ಬ್ಯಾರೆಲ್‍ಗೆ 55 ರಿಂದ 60 ಡಾಲರ್‍ನಷ್ಟು ದರವಿದ್ದರೆ 26 ಸಾವಿರ ಕೋಟಿ ರೂ.
– ಬ್ಯಾರೆಲ್‍ಗೆ 65 ಡಾಲರ್‍ಗಿಂತ ಹೆಚ್ಚಾದರೆ ಗ್ರಾಹಕರಿಗೆ ಇನ್ನಷ್ಟು ಹೊರೆ ನಿಶ್ಚಿತ
– ದೇಶೀಯ ಕಚ್ಚಾತೈಲ ಉದ್ಯಮಕ್ಕೆ ಸೆಸ್ ಕಡಿತ ಸೇರಿದಂತೆ ತೆರಿಗೆ ರಿಯಾಯಿತಿ
– ಶೇಕಡಾ 20ರಷ್ಟು ಮೌಲ್ಯ ವರ್ಧಿತ ತೆರಿಗೆ ಇಳಿಕೆ

ಖಾಸಗೀಕರಣ
– ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ

 

Share This Article
Leave a Comment

Leave a Reply

Your email address will not be published. Required fields are marked *