ಶಬರಿಮಲೆ ಮಾತ್ರ ಯಾಕೆ? ಮಸೀದಿಗೆ ಮಹಿಳಾ ಪ್ರವೇಶವೂ ಚರ್ಚೆ ಆಗಲಿ- ಪೇಜಾವರ ಶ್ರೀ

Public TV
1 Min Read

– ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಾಗಿದೆ

ಉಡುಪಿ: ಶಬರಿಮಲೆ ಮಾತ್ರ ಯಾಕೆ? ಮಸೀದಿಗೆ ಮಹಿಳಾ ಪ್ರವೇಶವೂ ಚರ್ಚೆ ಆಗಲಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಳು, ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಆಗಬೇಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಯಾಗಬೇಕು. ಹಿಂದೂ ಸಂತರು ಈ ಬಗ್ಗೆ ಸಭೆ ಸೇರಿ ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ: ರಾಮ್ ದೇವ್

ಇದೇ ವೇಳೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಮಾತನಾಡಿದ ಶ್ರೀಗಳು, ಒಂದೆಡೆ ಮಸೀದಿಗೆ ಮಹಿಳೆಯರ ಪ್ರವೇಶವಿಲ್ಲ, ಈ ಬಗ್ಗೆ ಚರ್ಚೆಯಾಗಲ್ಲ. ಶಬರಿಮಲೆಗೆ ಮಹಿಳೆಯರ ಪ್ರವೇಶ ಬೇಕೆಂಬ ಒತ್ತಾಯವಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಏಳು ಸದಸ್ಯರ ಪೀಠ ಈ ಬಗ್ಗೆ ಸರಿಯಾಗಿ ತೀರ್ಮಾನ ಮಾಡಲಿದೆ ಎಂದರು.

ಗೋವು ರಾಷ್ಟ್ರೀಯ ಪ್ರಾಣಿಯಾಗಲಿ:
ಹುಲಿ ಆತಂಕವಾದದ ಸೂಚಕ. ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಾಗಿದೆ. ನಮಗೆ ಆತಂಕವಾದ ಬೇಡ ಅನುಕಂಪವಾದ ಬೇಕು. ಹೀಗಾಗಿ ಭಾರತದ ರಾಷ್ಟ್ರ ಪ್ರಾಣಿ ಹುಲಿ ಬದಲು ಗೋವು ಆಗಬೇಕು ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.

ಗೋವು-ಗಂಗೆಯಿಂದ ಗೋವಿಂದ ಸಂತುಷ್ಟ:
ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧವಾಗಬೇಕು, ಗಂಗಾ ಶುದ್ಧೀಕರಣ ಆಗಬೇಕು. ಗೋವು ಹತ್ಯೆ ಮಾನವೀಯತೆಗೆ ಎಸಗುವ ದ್ರೋಹ. ಗಂಗೆ ನಮ್ಮನ್ನು ಶುದ್ಧೀಕರಣ ಮಾಡಬೇಕು, ನಾವು ಗಂಗೆಯನ್ನು ಶುದ್ಧೀಕರಣ ಮಾಡುವಂತೆ ಆಗಿದ್ದು ವಿಪರ್ಯಾಸ ಅಂತ ಕಳವಳ ವ್ಯಕ್ತಪಡಿಸಿದರು. ಈ ಎರಡು ಸಮಸ್ಯೆ ಬಗೆಹರಿದರೆ ಗೋವಿಂದ ಸಂತುಷ್ಟ ಆಗುತ್ತಾನೆ ಎಂದರು.

ನಮ್ಮ ಪ್ರಧಾನಿ ನರೇಂದ್ರ ಮೋದಿ ದಿಟ್ಟತನದವರು. ಕಾಶ್ಮೀರ, ರಾಮಮಂದಿರ ಸಮಸ್ಯೆ ನಿವಾರಣೆಯಾಯಿತು. ಶೀಘ್ರ ರಾಮಮಂದಿರ ನಿರ್ಮಾಣವಾಗಲಿದೆ. ನಮ್ಮ ರಾಷ್ಟ್ರ ರಾಮರಾಜ್ಯವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *