ಗೋಹತ್ಯೆ ವಿರುದ್ಧ ಉಡುಪಿಯಲ್ಲಿ 3 ನಿರ್ಣಯ ಮಂಡನೆ

Public TV
1 Min Read

ಉಡುಪಿ: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಧರ್ಮ ಸಂಸದ್ ನಲ್ಲಿ ಭಾನುವಾರ ಗೋ ಹತ್ಯೆ ನಿಷೇಧ ಕುರಿತು ಚರ್ಚೆ ನಡೆಯಿತು. ಈ ವೇಳೆ ಧಾರ್ಮಿಕ ಗೋಷ್ಠಿಯಲ್ಲಿ ಗೋ ಹತ್ಯೆ ನಿಷೇಧದ ಕುರಿತು ಮೂರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಭಾರತ ಗೋವು ಮಾಂಸ ರಫ್ತು ಮುಕ್ತ ಆಗಬೇಕು. ಗೋಹತ್ಯೆ ಪ್ರತೀ ರಾಜ್ಯದಲ್ಲೂ ನಿಷೇಧ ಆಗಬೇಕು. ದೇಶದಲ್ಲಿ ಗೋಮಂತ್ರಾಲಯ ಸ್ಥಾಪನೆ ಮಾಡಬೇಕು ಎಂಬ ಮೂರಂಶದ ನಿರ್ಣಯ ತೆಗದುಕೊಳ್ಳಲಾಯಿತು.

ಧರ್ಮ ಸಂಸದ್ ನಲ್ಲಿ ಭಾಗವಹಿಸಿದ್ದ ಸುಮಾರು 1300 ಸಂತರ ಮುಂದೆ ಗೋ ಹತ್ಯೆ ನಿಷೇಧದ ಕುರಿತ ನಿರ್ಣಯವನ್ನು ಘೋಷಣೆ ಮಾಡಲಾಯಿತು. ಇಂದು ಬೆಳಗ್ಗೆ ಒಂಬತ್ತೂವರೆಗೆ ಆರಂಭವಾದ ಗೋ ಹತ್ಯೆ ನಿಷೇಧ ಕಾಯ್ದೆಯ ವಿರುದ್ಧದ ಧಾರ್ಮಿಕ ಗೋಷ್ಠಿ ಮಧ್ಯಾಹ್ನ ಒಂದು ಗಂಟೆಯ ತನಕವೂ ಮುಂದುವರೆಯಿತು. ಸುಮಾರು ಹದಿನೈದರಿಂದ ಇಪ್ಪತ್ತು ಮಂದಿ ಪ್ರಮುಖ ಸಂತರು ತಮ್ಮ ವಿಚಾರವನ್ನು ಮಂಡಿಸಿದರು.

ಭಾರತ ದೇಶದ ಪ್ರತಿ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗುವಂತೆ ಸಂತರು ನೋಡಿಕೊಳ್ಳಬೇಕು. ಅಲ್ಲದೇ ರಾಜಕೀಯ ಪಕ್ಷಗಳ ಮೇಲೆ ಸಂತರು ಒತ್ತಡವನ್ನು ತಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆದೇಶಿಸಲಾಯಿತು. ಎಲ್ಲಾ ಸಂತರು ಧರ್ಮ ಸಂಸತ್ ನಿರ್ಣಯಕ್ಕೆ ಕೈ ಎತ್ತಿ ಜೈ ಘೋಷ ಮಾಡುವ ಮೂಲಕ ತಮ್ಮ ಅನುಮೋದನೆ ಸಲ್ಲಿಸಿದರು.

 


Share This Article
Leave a Comment

Leave a Reply

Your email address will not be published. Required fields are marked *