ಅರ್ಚಕರನ್ನ ರಕ್ಷಿಸಲು ಹೋದ ಇಬ್ಬರೂ ಅಗ್ನಿಕೊಂಡಕ್ಕೆ ಬಿದ್ದರು!

Public TV
1 Min Read

ರಾಮನಗರ: ಅಗ್ನಿಕೊಂಡ ಹಾಯುವ ವೇಳೆ ಅರ್ಚಕರೊಬ್ಬರು ಕೊಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಇತಿಹಾಸ ಪ್ರಸಿದ್ಧ ರೇವಣ ಸಿದ್ಧೇಶ್ವರ ಸ್ವಾಮಿಯ ಅಗ್ನಿಕೊಂಡ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ ಅಗ್ನಿಕೊಂಡ ಹಾಯುತ್ತಿದ್ದ ಅರ್ಚಕ ವಿಜಯ್ ಕುಮಾರ್ ಅವರು ಆಯತಪ್ಪಿ ಕೊಂಡದಲ್ಲಿ ಬಿದ್ದಿದ್ದಾರೆ. ಈ ವೇಳೆ ಅರ್ಚಕ ವಿಜಯ್ ನನ್ನು ರಕ್ಷಿಸಲು ಹೋದ ರುದ್ರೇಶ್ ಹಾಗೂ ಮಂಜುನಾಥ್ ಎಂಬ ಅರ್ಚಕರೂ ಕೂಡ ಕೊಂಡಕ್ಕೆ ಬಿದ್ದಿದ್ದು, ಸುಟ್ಟಗಾಯಗಳಾಗಿವೆ.

ಘಟನೆಯಿಂದ ಗಾಯಗೊಂಡ ಮೂರು ಜನ ಅರ್ಚಕರನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ತಿಂಗಳು ಕನಕಪುರ ತಾಲೂಕಿನ ಸಾತನೂರು ಹಾಗೂ ಉಯ್ಯಂಬಳ್ಳಿ ಗ್ರಾಮಗಳಲ್ಲೂ ಸಹ ಅಗ್ನಿಕೊಂಡ ದುರಂತ ನಡೆದಿದೆ. ಉಯ್ಯಂಬಳ್ಳಿಯಲ್ಲಿ ನಡೆದ ಅಗ್ನಿಕೊಂಡದಲ್ಲಿ ಬಿದ್ದ ಪೂಜಾರಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *