ರೈಲ್ವೆ ಹಳಿ ಬಳಿ ಎರಡು ಚಿರತೆಗಳ ಮೃತದೇಹ ಪತ್ತೆ – ರೈಲು ಡಿಕ್ಕಿಯಾಗಿ ಸಾವು ಶಂಕೆ

Public TV
0 Min Read

ಹಾಸನ: ಚನ್ನರಾಯಪಟ್ಟಣದ (Channarayapatna) ಕತ್ತರಿಘಟ್ಟ ಬಳಿಯ ರೈಲ್ವೆ ಹಳಿ ಸಮೀಪ ಎರಡು ಚಿರತೆಗಳ (Leopard) ಮೃತದೇಹ ಪತ್ತೆಯಾಗಿವೆ.

ರೈಲು ಡಿಕ್ಕಿಯಾಗಿ ಚಿರತೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು ಒಂದುವರೆ ವರ್ಷದ ಗಂಡು, ಮೂರರಿಂದ ನಾಲ್ಕು ವರ್ಷದ ಹೆಣ್ಣು ಚಿರತೆ ಶವ ರೈಲ್ವೆ ಹಳಿಗಳ ಪಕ್ಕದಲ್ಲೇ ಪತ್ತೆಯಾಗಿವೆ.‌ ವನ್ಯಜೀವಿ ವೈದ್ಯರು, ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಅರಣ್ಯಾಧಿಕಾರಿಗಳು ಅಂತಿಮ ಸಂಸ್ಕಾರ ನಡೆಸಿದ್ದಾರೆ.

ಸ್ಥಳಕ್ಕೆ ಡಿಸಿಎಫ್ ಸೌರಭ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article