ಸೇತುವೆಗೆ ಡಿಕ್ಕಿ ಹೊಡೆದ ಕಾರು: ತಾಯಿ-ಮಗ ಸ್ಥಳದಲ್ಲಿಯೇ ಸಾವು

Public TV
1 Min Read

ಮುಂಬೈ: ವೇಗವಾಗಿ ಬಂದ ಕಾರು ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದು, ತಂದೆಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಮುಂಬೈ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ತಾಯಿ ಸ್ವಪ್ನಾ ವಿವೇಕ್ ಮಾರ್ಕಂಡೆ (62) ಮತ್ತು ಮಗ ಸುಯೋಗ್ ಮಾರ್ಕಂಡೆ (32) ಮೃತ ದುರ್ದೈವಿಗಳು. ತಂದೆ ವಿವೇಕ್ ಮಾರ್ಕಂಡೆ ಅವರಿಗೆ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸಮೀಪದ ಕಾಸಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಭಾನುವಾರ ಮುಂಜಾನೆ ಸುಮಾರು 6.30 ಕ್ಕೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಸೂರತ್‍ನಿಂದ ಕೊಪಾರ್ ಖೈರಾನೆ ಕಡೆಗೆ ಹೋಗುತ್ತಿದ್ದರು. ಸುಯೋಗ್ ಕಾರು ಚಲಾಯಿಸುತ್ತಿದ್ದನು. ಟ್ರಾಫಿಕ್ ಇಲ್ಲದ ಕಾರಣ ಸುಯೋಗ್ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ. ಸೂರ್ಯ ನದಿಯ ಬ್ರಿಡ್ಜ್ ನಲ್ಲಿ 3 ಕಿರಿದಾದ ಮಾರ್ಗವಿದ್ದು, ಅಲ್ಲಿ ಹೋಗುವಾಗ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆಯ ಡಿವೈಡರ್‍ಗೆ ಡಿಕ್ಕಿ ಹೊಡೆದು ಸೂರ್ಯ ನದಿಗೆ ಹೋಗಿ ಬಿದ್ದಿದೆ ಎಂದು ಕಾಸಾ ಪೊಲೀಸ್ ಠಾಣೆಯ ಅಧಿಕಾರಿ ಜಯಪ್ರಕಾಶ್ ಗುಟೆ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 304 (ಎ) ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಗುಟೆ ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *