ಫಕೀರರ ವೇಷ ತೊಟ್ಟು ಜನರಿಗೆ ವಂಚನೆ – ಇಬ್ಬರು ವಶ

Public TV
1 Min Read

ಕಾರವಾರ: ಫಕೀರರ ವೇಷ ಧರಿಸಿಕೊಂಡು ಜನರನ್ನು ಮೋಸ ಮಾಡುತ್ತಿದ್ದ ಯುವಕರಿಬ್ಬರನ್ನು ಜನರೇ ಪೊಲೀಸರಿಗೆ (Police) ಹಿಡಿದುಕೊಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ.

ಮುಂಬೈ (Mumbai) ಮೂಲದ ಯುವಕರಾದ ಅರುಣ್ ಹಾಗೂ ವಿಷ್ಣು ಫಕೀರರ ವೇಷ ಧರಿಸಿಕೊಂಡು ಮನೆ ಮನೆ ತಿರುಗಾಡುತ್ತಾ ಜನರನ್ನು ಮೋಸ ಮಾಡುತ್ತಿದ್ದರು. ಅಲ್ಲದೇ ಒಂದಿಬ್ಬರು ಇರುತ್ತಿದ್ದ ಮನೆಗಳನ್ನು ಗುರುತು ಮಾಡಿಕೊಂಡು ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಜನರಿಂದ ಹಣ ಕೀಳಲಾರಂಭಿಸಿದ್ದರು.  ಇದನ್ನೂ ಓದಿ: ಭ್ರಷ್ಟಾಚಾರದ ಕರಾಳ ಮುಖ ಬಯಲಾಗಿದೆ, ಅಕ್ರಮ ಸಂಪತ್ತನ್ನು ನೀವೆ ಹಂಚಿಬಿಡಿ – ಸಿಎಂಗೆ ವಿಜಯೇಂದ್ರ ಟಾಂಗ್‌

ಯುವಕರ ಮೇಲೆ ಸಂಶಯಗೊಂಡ ದಾಂಡೇಲಿಯ ದಾದಾ ಪೀರ್ ನದಿಮುಲ್ಲಾ ಎಂಬುವವರು ಇಬ್ಬರನ್ನೂ ವಿಚಾರಣೆ ನಡೆಸಿದಾಗ ನೈಜ ವಿಚಾರ ಹೊರಕ್ಕೆ ಬಂದಿದೆ. ಕೂಡಲೇ ದಾಂಡೇಲಿ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

Share This Article