ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಐಪಿಎಸ್ ರೂಪಾ, ಪ್ರತಾಪ್ ಸಿಂಹ ನಡುವೆ ಟ್ವಿಟ್ಟರ್ ವಾರ್

Public TV
1 Min Read

ಬೆಂಗಳೂರು: ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ ನಡುವೆ ಟ್ವೀಟ್ ವಾರ್ ಶುರುವಾಗಿದೆ.

ಐಪಿಎಸ್ ಅಧಿಕಾರಿಗಳಾದ ಮಧುಕರ್ ಶೆಟ್ಟಿ, ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್, ಉತ್ತರ ವಲಯ ಡಿಸಿಪಿ ಲಾಭೂರಾಂ ಹಾಗೂ ಡಿಐಜಿ ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ಬಗ್ಗೆ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನ ಪ್ರತಾಪ್ ಸಿಂಹ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಶೇರ್ ಮಾಡಿದ್ರು.

ಸಂಸದ ಪ್ರತಾಪ್ ಸಿಂಹ ವರದಿ ಶೇರ್ ಮಾಡಿದ್ದರ ಬಗ್ಗೆ ಆಕ್ಷೇಪ ಎತ್ತಿರುವ ಐಪಿಎಸ್ ರೂಪ, ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಹಲವಾರು ಪ್ರಶ್ನೆಗಳನ್ನ ಎತ್ತಿದ್ದಾರೆ. ಅಧಿಕಾರಿಗಳನ್ನ ರಾಜಕೀಯದಿಂದ ದೂರವಿಡಿ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಯ ಅಗತ್ಯ ಮತ್ತು ಆಸೆಯಾಗಿರುತ್ತದೆ. ಹಾಗೇ ಯಾವುದೇ ಒಬ್ಬ ಅಥವಾ ಇಬ್ಬರು ಅಧಿಕಾರಿಯನ್ನ ಹೀರೋ ಮಾಡುವುದು ಸರಿಯಲ್ಲ. ಕೆಲವು ಅಧಿಕಾರಿಗಳ ಮೇಲೆ ಮಾತ್ರ ಅವಲಂಬಿತವಾದ್ರೆ ಇಡೀ ವ್ಯವಸ್ಥೆಯೇ ದುರ್ಬಲವಾಗುತ್ತದೆ. ಆ ಅಧಿಕಾರಿಗೆ ವರ್ಗಾವಣೆ ಅಥವಾ ನಿವೃತ್ತಿಯಾದ್ರೆ ಆಗ ಇಡೀ ವ್ಯವಸ್ಥೆಯೇ ಕುಸಿಯುತ್ತದೆ. ಅದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ ಎಂದೆಲ್ಲಾ ರೂಪಾ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ರೂಪಾ ಅವರ ಪೋಸ್ಟ್ ಗೆ ಸ್ಪಷ್ಟನೆ ನೀಡಿರುವ ಪ್ರತಾಪ್ ಸಿಂಹ, ಪಬ್ಲಿಕ್ ಟಿವಿ ವರದಿಯನ್ನಷ್ಟೇ ಶೇರ್ ಮಾಡಿದ್ದೇನೆ. ನಿಮಗೆ ಸಮಯವಿದ್ದರೆ ಈ ಸುದ್ದಿಯನ್ನು ಓದಿ ಎಂದು ಪಬ್ಲಿಕ್ ಟಿವಿ ವರದಿಯ ಲಿಂಕ್ ಹಾಕಿ ಟ್ವೀಟ್ ಮಾಡಿದ್ದಾರೆ.

WHY THE VIEWS OF HONORABLE MP PRATAP SIMHA SO VERY WRONG AND DANGEROUS :To Honorable MP…Respected Sir , I earnestly…

Roopa D Moudgil 发布于 2017年3月17日

ಇದನ್ನೂ ಓದಿ: ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

Share This Article
Leave a Comment

Leave a Reply

Your email address will not be published. Required fields are marked *