ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣ – ಇಬ್ಬರ ಹೆಸರು ಕೈಬಿಡುವಂತೆ ದೂರುದಾರೆ ಮನವಿ

Public TV
1 Min Read

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ, ಪತ್ನಿ, ಬೌನ್ಸರ್‍ ಗಳ ಗೂಂಡಾಗಿರಿ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ರಾತ್ರೋ ರಾತ್ರಿ ಇಬ್ಬರ ಹೆಸರನ್ನು ಕೈ ಬಿಡಿ ಎಂದು ದೂರುದಾರೆ ಮನವಿ ಮಾಡಿದ್ದಾರೆ.

ರಾತ್ರೋ ರಾತ್ರಿ ಮುಚ್ಚಿದ ಲಕೋಟೆಯಲ್ಲಿ ಮನವಿಯೊಂದಿಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ಬಂದ ದೂರುದಾರೆ ಅನುರಾಧೆ, ಎಫ್ ಐಆರ್ ನಲ್ಲಿ ಎರಡು ಹೆಸರು ಮಿಸ್ ಆಗಿ ಸೇರಿದೆ ಅದನ್ನ ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಮಾತ್ರ, ಈಗಾಗಲೇ ಪ್ರಕರಣ ಸಂಬಂಧ ಎಫ್‍ಐಆರ್ ಆಗಿದೆ, ಕೋರ್ಟಿಗೂ ಕಳುಹಿಸಿ ಆಗಿದೆ. ಎಫ್‍ಐಆರ್ ನಿಂದ ಹೆಸರು ಕೈಬಿಡಲು ಆಗಲ್ಲ ಎಂದು ದೂರುದಾರೆಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ಇತ್ತ ಕೇಸ್ ದಾಖಲಾಗಿ 6 ದಿನವಾದರೂ ಆರೋಪಿಗಳು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಸ್ಟಾರ್ ನಟ, ಪ್ರಭಾವಿ ನಿರ್ಮಾಪಕ ಸಂಧಾನ ಹಿನ್ನೆಲೆಯಲ್ಲಿ ಅನುರಾಧೆ ಅವರು ವಾಪಸ್‍ಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಂಜುಳ ಪುರುಷೋತ್ತಮ ದೂರುದಾರೆ ಅನುರಾಧೆ ಅವರ ಮಾಲಕಿ. ಇದನ್ನೂ ಓದಿ:ಟಿ-20 ವಿಶ್ವಕಪ್‍ನಲ್ಲಿ ಪಾಕ್ ಗೆಲುವು ಆಚರಿಸೋರು ದೇಶದ್ರೋಹ ಆರೋಪ ಎದುರಿಸ್ಬೇಕಾಗಿರುತ್ತೆ: ಯೋಗಿ ಆದಿತ್ಯನಾಥ್

ಒಟ್ಟಿನಲ್ಲಿ ಕೊನೆಗೂ ದೊಡ್ಡ ನಿರ್ಮಾಪಕ ಮತ್ತು ಸ್ಟಾರ್ ನಟನ ಮಾತಿಗೆ ಮಂಜುಳಾ ಪುರುಷೋತ್ತಮ್ ಮಣಿದ್ರಾ ಎಂಬ ಪ್ರಶ್ನೆ ಎದ್ದಿದ್ದು, ರಹಸ್ಯ ಸ್ಥಳದಲ್ಲಿ ಸ್ಟಾರ್ ನಿರ್ಮಾಪಕ ಮತ್ತು ನಟನಿಂದ ರಾಜೀ ಸಂಧಾನ ನಡೆದಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *