ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ- ಮಳೆಗಾಗಿ ತುಮಕೂರು ಜನ ಪ್ರಾರ್ಥನೆ

Public TV
1 Min Read

– ಮಹಿಳೆಯರ ಸಖತ್ ಸ್ಟೆಪ್

ತುಮಕೂರು: ಒಂದಿಷ್ಟು ಊರಲ್ಲಿ ಸಾಕು ನಿಲ್ಲೋ ಮಳೆರಾಯ, ಇನ್ನೊಂದಿಷ್ಟು ಊರಲ್ಲಿ ಹುಯ್ಯೋ… ಹುಯ್ಯೋ… ಮಳೆರಾಯ ಎನ್ನುವ ಹಾಗೇ ಆಗಿದ್ದು, ತುಮಕೂರು ಜಿಲ್ಲೆಯಲ್ಲಿ ಜನರು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

ರಾಜ್ಯದ ಹಲವೆಡೆ ಮಳೆಯಿಂದ ಪ್ರವಾಹ ಉಂಟಾದರೆ, ತುಮಕೂರು ಜಿಲ್ಲೆಗೆ ಮಾತ್ರ ವರಣದೇವ ತನ್ನ ಕೃಪೆಯನ್ನು ತೋರಿಲ್ಲ. ಆದ್ದರಿಂದ ತುಮಕೂರಿನ ಜನರು ಮಳೆಯನ್ನು ಕರುಣಿಸು ದೇವ ಎಂದು ಹನುಮನ ಮೊರೆ ಹೋಗಿದ್ದಾರೆ.

ರಾಜ್ಯದ ಉತ್ತರ ಕರ್ನಾಟಕ, ಕೊಡಗು ಮುಂತಾದ ಜಿಲ್ಲೆಗಳು ಮಹಾಮಳೆಗೆ ಸಿಕ್ಕಿ ನಲುಗಿ ಹೋಗಿವೆ. ಆದರೆ ತುಮಕೂರಲ್ಲಿ ಮಾತ್ರ ಮಳೆ ಮರೀಚಿಕೆಯಾಗಿ ಹೋಗಿದೆ. ಆದ್ದರಿಂದ ಜಿಲ್ಲೆಯ ಕೊರಟಗೆರೆ ತಾಲೂಕಿನ ಮರೇನಾಯಕನಹಳ್ಳಿ ಗ್ರಾಮಸ್ಥರು ಮಳೆ ಬರಲಿ ಎಂದು ಆಂಜನೇಯನಿಗೆ ಆರತಿ ಬೆಳಗಿದ್ದಾರೆ.

ವಿಶೇಷ ಎಂದರೆ ಹನುಮನ ಮೆರವಣಿಗೆ ಮಾಡುವ ವೇಳೆ ಜಾನಪದ ಪದಗಳನ್ನು ಹೇಳುತ್ತಾ ಮಳೆಗಾಗಿ ಮಹಿಳೆಯರು ಸಖತ್ ಸ್ಟೇಪ್ ಹಾಕಿದ್ದಾರೆ. ಉತ್ತರಕ್ಕೆ ಮಳೆ ಕೊಟ್ಟೆ ನಮಗೂ ಮಳೆ ಕೊಡೋ ಹನುಮ.. ಮಳೆ ಕೋಡೋ ಹನುಮ.. ಎಂದು ಕುಣಿಯುವ ಮೂಲಕ ಮಹಿಳಾ ಮಣಿಯರು ಬೇಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *