ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಶಾಸಕನಿಗೆ ಬಿಜೆಪಿ ಆಫರ್

Public TV
1 Min Read

ತುಮಕೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸುಳಿವು ಸಿಕ್ಕಂತಿದೆ. ಸ್ವತಃ ಬಿಜೆಪಿ ನಾಯಕರೇ ಮಧ್ಯಂತರ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ಗುಬ್ಬಿಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿಕೆ ಈ ಸುಳಿವಿಗೆ ಇನ್ನಷ್ಟು ಪುಷ್ಠಿಕೊಟ್ಟಿದೆ. ಬಿಜೆಪಿ ಮುಖಂಡ ಬೆಟ್ಟಸ್ವಾಮಿ ಅವರು ಎಸ್.ಆರ್ ಶ್ರೀನಿವಾಸ್ ಮನೆಗೆ ಹೋಗಿ ಬಿಜೆಪಿಯಿಂದ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದಾರೆ. ಯಡಿಯೂರಪ್ಪಗೆ ಹೇಳಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದಾರೆ. ಬೇಕಿದ್ದರೆ ಅವರು ಬಂದಿರುವುದಕ್ಕೆ ಸಾಕ್ಷಿಯಾಗಿ ಮನೆಯ ಸಿಸಿಟಿವಿ ನೋಡಿ. ಬೆಟ್ಟಸ್ವಾಮಿಯೇ ಬಂದು ಬಿಜೆಪಿಗೆ ಬಾ ನಾವೆಲ್ಲ ಒಂದಾಗೋಣ ಎಂದು  ಹೇಳಿರುವುದಾಗಿ ಸ್ವತಃ ಶ್ರೀನಿವಾಸ್ ಅವರೇ ತಿಳಿಸಿದ್ದಾರೆ.

ಬೆಟ್ಟಸ್ವಾಮಿ ಕಳೆದ ಬಾರಿ ಗುಬ್ಬಿಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿಯಾಗಿದ್ದಾರೆ. ಸತತ ಮೂರು ಬಾರಿ ಸೋತ ಬೆಟ್ಟಸ್ವಾಮಿಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ಹಾಗಾಗಿ ಕಳೆದ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೆಟ್ಟಸ್ವಾಮಿ ಸೋಲಿಗೆ ಕಾರಣವಾದ ದಿಲೀಪ್ ಕುಮಾರ್ ಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ದಿಲೀಪ್ ಕುಮಾರ್ ಗೆ ಟಿಕೆಟ್ ತಪ್ಪಿಸುವ ಸಲುವಾಗಿ ಬೆಟ್ಟಸ್ವಾಮಿ, ಎಸ್.ಆರ್.ಶ್ರೀನಿವಾಸ್ ಗೆ ಗಾಳ ಹಾಕಲು ಹೊರಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *