ಕಾಂಗ್ರೆಸ್ಸಿಗರಿಗೆ ಮಾನಸಿಕ ತೊಂದರೆಯಾಗಿ ಮೆಂಟಲ್ ಅಪ್ಸೆಟ್ ಆಗಿದೆ: ಜಿಎಸ್ ಬಸವರಾಜು

Public TV
1 Min Read

– ಶ್ರೀನಿವಾಸ್ ನನ್ನ ಮುಂದೆ ಬಚ್ಚ

ತುಮಕೂರು: ಕಾಂಗ್ರೆಸ್ಸಿಗರಿಗೆ ಮಾನಸಿಕ ತೊಂದರೆಯಾಗಿ ಮೆಂಟಲ್ ಅಪ್ಸೆಟ್ ಆಗಿದೆ. ಕಾಂಗ್ರೆಸ್‍ನ ಎಲ್ಲರೂ ಮಾನಸಿಕ ರೋಗಿಗಳಾಗಿದ್ದಾರೆ ಎಂದು ಸಂಸದ ಜಿ.ಎಸ್ ಬಸವರಾಜು ವ್ಯಂಗ್ಯವಾಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‍ನವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳೋಕಾಗಲ್ಲ. ಅವರು ಇವತ್ತೇ ಎಲೆಕ್ಷನ್ ನಡೆಯುತ್ತೆ ಅಂತಾರೆ. ಕಾಂಗ್ರೆಸ್‍ನ ಎಲ್ಲರೂ ಮಾನಸಿಕ ರೋಗಿಗಳಾಗಿದ್ದಾರೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿ ಪಕ್ಷದಲ್ಲಿ ಒಬ್ಬರು ಚಂಗಲು ಬಿದ್ದು ಆಟಾ ಆಡಿದ್ದಾರಾ? ಒಬ್ಬ ಬಿಜೆಪಿ ಎಂಎಲ್‍ಎ ಏನಾದರೂ ಈ ವಿಚಾರದ ಬಗ್ಗೆ ಅಪ್ಪಿತಪ್ಪಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.

ಜಿಎಸ್ ಬಸವರಾಜು ಅತಿ ದೊಡ್ಡ ಸುಳ್ಳುಗಾರ ಎಂಬ ಎಸ್.ಅರ್ ಶ್ರೀನಿವಾಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್.ಆರ್ ಶ್ರೀನಿವಾಸ್ ಗೆ ಚೆಡ್ಡಿ ಹಾಕುವುದಕ್ಕೆ ಕಾಸ್ ಇರಲಿಲ್ಲ. ಹೆಂಡದಂಗಡಿ ಮಾಡಿಸಿಕೊಟ್ಟೆ. ಚೆನ್ನಾಗಿ ದುಡ್ಡಾಗಿದೆ ನನ್ನನ್ನ ಬೈಬೇಕು ಅಂತಾನೇ ಬೈತಾನೆ. ನಾನು ಯಾಕೆ ಉತ್ತರ ಕೊಡಲಿ. ಅವರಪ್ಪನ ಕೇಳಿದರೆ ಅವನಿಗೆ ಗೊತ್ತಾಗುತ್ತೆ ನಮ್ಮಿಂದ ಏನಾಗಿದೆ ಎಂದು. ಅವರಪ್ಪ ಬಸವರಾಜು ಭ್ರಷ್ಟ ಎಂದು ಹೇಳಿದರೆ ಆಗ ನಾನು ಒಪ್ಪಿಕೊಳ್ಳುತ್ತೇನೆ. ಶ್ರೀನಿವಾಸ್ ನನ್ನ ಮುಂದೆ ಬಚ್ಚ. ಬಾಯಿಗ್ ಬಂದಂತೆ ಮಾತನಾಡುತ್ತಾನೆ. ಗುಬ್ಬಿ ತಾಲೂಕಿಗೆ ಅವನ ಕೊಡುಗೆ ಏನು? ರೈಲನ್ನೂ ನಾನೇ ಬಿಟ್ಟೆ ಅಂತಾನೆ ಎಂದು ವಾಗ್ದಾಳಿ ಮಾಡಿದರು.

ಬಸವರಾಜು ಕಾರನ್ನು ನಾನೇ ಡ್ರೈವ್ ಮಾಡುತ್ತಿದ್ದೆ ಅವನ ಬಗ್ಗೆ ಚೆನ್ನಾಗಿ ಗೊತ್ತು ಎಂಬ ಶ್ರೀನಿವಾಸ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರಪ್ಪ ನನ್ನ ಜೊತೆ ಇರೋನು. ಆಗ ಇವನು ಬರೋನು ಡ್ರೈವರ್ ಕೆಲಸ ಮಾಡಿಕೊಂಡು ಹೋಗೋನು ನನ್ನ ಕೆಲಸ ಏನು ಮಾಡಿಲ್ಲ. ಹೆಂಡದಂಗಡಿಳನ್ನು ಮಂಜೂರು ಮಾಡಿಸಿಕೊಳ್ಳಲು ಕರೆದುಕೊಂಡು ಹೋಗೋನು ಎಂದು ಶ್ರೀನಿವಾಸ್‍ಗೆ ಏಕವಚನದಲ್ಲೇ ಬಸವರಾಜು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *