ನಾಯಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ – ಮೂವರು ಗಂಭೀರ

Public TV
1 Min Read

ತುಮಕೂರು: ನಾಯಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಮಣಕಿಕೆರೆ ಗ್ರಾಮದಲ್ಲಿ ನಡೆದಿದೆ.

ಶಿವಕುಮಾರ್ ಸ್ವಾಮಿ, ತಾಯಿ ಸತ್ಯ ಪ್ರೇಮ, ಪತ್ನಿ ರೇಖಾಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಕುಮಾರ್ ಸ್ವಾಮಿ ಪಕ್ಕದ ಮನೆಯವರಾದ ವರುಣ್ ಹಾಗೂ ಕರ್ಣ ಎಂಬವರು ಈ ಕುಟುಂಬದ ಮೇಲೆ ನಾಯಿ ವಿಚಾರಕ್ಕೆ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ.

ಶಿವಕುಮಾರಸ್ವಾಮಿ ಅವರ ಸಾಕುನಾಯಿ ಆರೋಪಿ ವರುಣ್ ಹಾಗೂ ಕರ್ಣ ಅವರ ಮನೆ ಬಳಿ ಹೋಗಿದಕ್ಕೆ ಜಗಳ ತೆಗೆದ ಅವರು, ಶಿವಕುಮಾರಸ್ವಾಮಿ ಕುಟುಂಬದ ಮೇಲೆ ಕಬ್ಬಿಣದ ಪೈಪಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಸ್ವಾಮಿ ಕುಟುಂಬದವರಿಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *