ಅಂಗನವಾಡಿ ಆಹಾರದಲ್ಲಿ ಹುಳಗಳನ್ನ ಕಂಡು ಶಾಸಕರು ಕಂಗಾಲು

Public TV
1 Min Read

ತುಮಕೂರು: ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ದಾಸ್ತಾನಿನಲ್ಲಿ ಹುಳಗಳನ್ನ ಕಂಡು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಕಂಗಾಲಾಗಿದ್ದಾರೆ.

ತುರುವೇಕೆ ಪಟ್ಟಣಕ್ಕೆ ಹೊಂದಿಕೊಂಡಿರುವ ಹಾವಾಳ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಆಹಾರ ಸರಬರಾಜು ದಾಸ್ತಾನು ಮಳಿಗೆಗೆ ಶಾಸಕ ಮಸಾಲೆ ಜಯರಾಮ್ ಧಿಡೀರ್ ಭೇಟಿ ಕೊಟ್ಟಾಗ ಈ ಅವ್ಯವಸ್ಥೆ ಬೆಳಕಿಗೆ ಬಂದಿದೆ.

ಅಕ್ಕಿ ಮತ್ತು ರಾಗಿ ದಾಸ್ತಾನಿನಲ್ಲಿ ಬರೀ ಹುಳಗಳೇ ತುಂಬಿಕೊಂಡಿತ್ತು. ಹೀಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ ಶಾಸಕರು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಹಾರ ಪೂರೈಕೆ ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು. ಅಲ್ಲದೆ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಸ್ಥಳದಲ್ಲಿಯೇ ಸಚಿವ ಮಾಧುಸ್ವಾಮಿ ಅವರಿಗೆ ಕರೆಮಾಡಿ ಒತ್ತಾಯಸಿದರು.

Share This Article
Leave a Comment

Leave a Reply

Your email address will not be published. Required fields are marked *