ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳ ಎಣ್ಣೆ ಪಾರ್ಟಿ

Public TV
1 Min Read

-ಗುತ್ತಿಗೆದಾರರಿಂದ 10 ಲಕ್ಷ ಪಡೆದು ಮಸ್ತಿ!

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮದ್ಯ ನಿಷೇಧಿಸಲಾಗಿದೆ. ಆದರೂ ಕೂಡ ಅಧಿಕಾರಿಗಳು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ.

ಸರ್ಕಾರಿ ಐಬಿಯಲ್ಲಿ ಮದ್ಯಪಾನ ನಿಷೇಧ ಇದ್ದರೂ ತಡ ರಾತ್ರಿಯವರೆಗೂ ಮದ್ಯ-ಮಾಂಸ ತಿಂದು ಅಧಿಕಾರಿಗಳು ಮೋಜು ಮಸ್ತಿ ಮಾಡಿದ್ದಾರೆ. ಕುಣಿಗಲ್ ಪಿಡಬ್ಲ್ಯೂಡಿ ಎಂಜಿನಿಯರ್ ದಿವಾಕರ್ ವರ್ಗಾವಣೆ ಆಗಿದ್ದಕ್ಕೆ ಐಬಿಯಲ್ಲಿ ಅವರಿಗೆ ಸೆಂಡ್ ಆಫ್ ಪಾರ್ಟಿ ಏರ್ಪಡಿಸಲಾಗಿತ್ತು. ದಿವಾಕರ್ ಅವರು ವರ್ಗಾವಣೆಗೊಳ್ಳುವ ಆತುರದಲ್ಲಿ ಗುತ್ತಿಗೆದಾರರಿಗೆ ಬಾಕಿ ಇದ್ದ ಸುಮಾರು 28 ಕೋಟಿ ರೂ. ಬಿಲ್ ಪಾಸ್ ಮಾಡಿದ್ದಾರೆ. ಈ ಕೆಲಸ ಮಾಡಿಕೊಡಲು ಗುತ್ತಿಗೆದಾರರಿಂದ ಸುಮಾರು 10 ಲಕ್ಷ ರೂ. ವಸೂಲಿ ಮಾಡಲಾಗಿತ್ತು. ಈ ಹಣದಲ್ಲಿಯೇ ಅಧಿಕಾರಿಗಳು ಗುಂಡು-ತುಂಡು ತಿಂದು ಸಖತ್ ಎಂಜಾಯ್ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಪಾರ್ಟಿಯಲ್ಲಿ ಗುತ್ತಿಗೆದಾರರೂ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು, ರಾಜಕೀಯ ಮುಖಂಡರು ಕೂಡ ಬಾಡೂಟದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ. ತಡರಾತ್ರಿ 3 ಗಂಟೆವರೆಗೂ ಅಧಿಕಾರಿಗಳು-ಗುತ್ತಿಗೆದಾರರು ಮದ್ಯಾರಾಧನೆ ಮಾಡಿ ಸರ್ಕಾರಿ ಬಂಗಲೆಯನ್ನ ರಾಜಾರೋಷವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *