ಬಳ್ಳಾರಿ: ಮಂಜು ಮುಸುಕಿದ ವಾತಾವರಣ- ಲ್ಯಾಂಡಿಂಗ್ ಮಾಡಲು ಪರದಾಡಿ ವಾಪಸ್ಸಾದ ಟ್ರೂಜೆಟ್

Public TV
1 Min Read

ಬಳ್ಳಾರಿ: ದಟ್ಟವಾದ ಮಂಜು ಆವರಿಸಿದ ಹಿನ್ನಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪರದಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಇತ್ತೀಚಿಗಷ್ಟೆ ಬಳ್ಳಾರಿಯ ತೋರಣಗಲ್ ನಿಂದ ಹೈದರಾಬಾದ್ ಗೆ ಟ್ರೂ ಜೆಟ್ ವಿಮಾನಯಾನ ಸೇವೆ ಆರಂಭವಾಗಿತ್ತು. ಆದ್ರೆ ಇಂದು ಮುಂಜಾನೆ ಮಂಜು ಇದ್ದ ಕಾರಣ ಲ್ಯಾಂಡಿಗ್ ವೇಳೆ ತೊಡಕುಂಟಾಯಿತು. ಇದರಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತ್ತು.

ಇಂದು ಮಂಜಾನೆ 7:30ಕ್ಕೆ ಎಂದಿನಂತೆ ಹೈದರಾಬಾದ್ ನಿಂದ ತೋರಣಗಲ್ ಗೆ ಆಗಮಿಸಿದ ಟ್ರೂ ಜೆಟ್ ವಿಮಾನವನ್ನು ಲ್ಯಾಂಡಿಂಗ್ ಮಾಡುವ ವೇಳೆ ಮಂಜು ಕವಿದ ಪರಿಣಾಮ ಕೆಲಕಾಲ ಪೈಲಟ್ ಲ್ಯಾಂಡಿಂಗ್ ಮಾಡಲು ಪರದಾಡಿದರು. ಮೂರು ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ರೂ ಸಫಲವಾಗಲಿಲ್ಲ. ಹೀಗಾಗಿ ಮಂಜು ಸಾಕಷ್ಟು ಕವಿದ ಪರಿಣಾಮ ಪೈಲಟ್ ಮರಳಿ ವಿಮಾನದಲ್ಲಿ ಹೈದರಾಬಾದ್ ಗೆ ವಾಪಾಸ್ ಹೋದ್ರು.

ಹೀಗಾಗಿ ಜಿಂದಾಲ್ ಏರ್ಪೋರ್ಟ್ ನಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

Share This Article
Leave a Comment

Leave a Reply

Your email address will not be published. Required fields are marked *