ಟಾಟಾ ಏಸ್‍ಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ 11 ಮಂದಿಗೆ ಗಾಯ

Public TV
1 Min Read

ಬಳ್ಳಾರಿ: ಲಾರಿಯೊಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 11 ಜನರು ಗಾಯಗೊಂಡ ಘಟನೆ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.

ಗಾಯಾಳುಗಳನ್ನು ಕೂಡ್ಲಿಗಿ ತಾಲೂಕಿನ ಕೈವಲ್ಲಾಪುರ ಗ್ರಾಮದ ನಿವಾಸಿಗಳಾದ ಸೀತಮ್ಮ(30), ಕೊಟ್ಲೇಶ(35), ಕಾವೇರಿ(12), ದುರ್ಗಮ್ಮ(18), ಅಜೇಯ(10), ಪವಿತ್ರ(15), ಲಕ್ಷ್ಮೀ(20), ಆನಂದ(35) ಹಾಗೂ ಪ್ರವೀಣ(7) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಹೊಸಪೇಟೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.

ಟಾಟಾ ಏಸ್ ನಲ್ಲಿದ್ದವರು ಕೈವಲ್ಲಾಪುರ ಗ್ರಾಮದಿಂದ ಮುನಿರಾಬಾದ್ (ಹುಲಿಗಿ ಕ್ಷೇತ್ರ)ಗೆ ಪ್ರಯಾಣ ಬೆಳೆಸಿದ್ದು, ಮಾರ್ಗ ಮಧ್ಯದಲ್ಲಿ (ಚಿಲಕನಹಟ್ಟಿ ಗ್ರಾಮ) ಅತಿ ವೇಗದಿಂದ ಬಂದ ಲಾರಿ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡದಿದೆ. ಘಟನೆಯ ನಂತರ ಹೊಸಪೇಟೆ ಬಡಾವಣೆ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *