ಭೋಪಾಲ್: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬತ್ ತಹಸಿಲ್ನ ಬುಡಕಟ್ಟು ಜನಾಂಗದ ನಾಲ್ವರು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧಿಕೃತ ಹೆಲಿಕಾಪ್ಟರ್ ಪ್ರಯಾಣ ಮಾಡಿದ್ದಾರೆ.
मैं अमर शहीदों का चारण, उनके गुण गाया करता हूँ
जो कर्ज राष्ट्र ने खाया है, मैं उसे चुकाया करता हूँ।महान क्रांतिकारी, मां भारती के वीर सपूत, चंद्रशेखर आजाद जी की जन्मस्थली चंद्रशेखर आजाद नगर पहुंचकर उनके चरणों में प्रणाम किया। pic.twitter.com/Xx2wiMpgSK
— Shivraj Singh Chouhan (@ChouhanShivraj) September 15, 2021
ಬುಡಕಟ್ಟು ಪ್ರಾಬಲ್ಯದ ಅಲಿರಾಜಪುರ ಜಿಲ್ಲೆಯ ರಣಬೈಡಾದಿಂದ ಸೇಜವಾಡದವರೆಗೆ ಸಿಎಂ ಹೆಲಿಕಾಪ್ಟರ್ನಲ್ಲಿ ಬುಡಕಟ್ಟು ಜನಾಂಗದ ನಾಲ್ವರು ಪ್ರಯಾಣಿಸಿದ್ದಾರೆ. ಆದರೆ ಸಿಎಂ ಚೌಹಾಣ್ ಅವರು ತಮ್ಮ ಜನ ದರ್ಶನ ಯಾತ್ರೆಯ ಭಾಗವಾಗಿ ವಿಧಾನಸಭೆ ಉಪ ಚುನಾವಣೆ ಎದುರಿಸಲಿರುವ ಜೋಬತ್ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದ್ದರಿಂದ ರಸ್ತೆ ಮೂಲಕ ಪ್ರಯಾಣಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಆಪ್ತ ಸ್ನೇಹಿತ, ಸಂಬಂಧಿ ಸಾವು
मेरे गरीब भाई-बहनों के चेहरों पर किसी भी प्रकार से मुस्कान आ जाये, यही मेरे लिए खुशी की बात है, इसी से मुझे आनंद मिलता है।
आज जनदर्शन के दौरान मैं अलीराजपुर के जनजातीय भाई दरियाव सिंह, मंगल सिंह, रिच्छु सिंह बघेल और जोध सिंह को साथ हेलीकॉप्टर में घुमाने लेकर गया। pic.twitter.com/9yESrB8G3i
— Shivraj Singh Chouhan (@ChouhanShivraj) September 15, 2021
ನಾಲ್ಕು ಆದಿವಾಸಿಗಳಿಗೆ ಸಿಎಂ ಇಲ್ಲದೆ ಹೆಲಿಕಾಪ್ಟರ್ನಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲಾಯಿತು. ಏಕೆಂದರೆ ಅವರು ಚೌಹಾಣ್ ಅವರು ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಸ್ತೆಯ ಮೂಲಕ ಪ್ರಯಾಣಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ಬುಡಕಟ್ಟು ಜನಾಂಗದ ದರಿಯವ್ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್ ಅವರು ಹೆಲಿಕಾಪ್ಟರ್ನಲ್ಲಿ ಸುಮಾರು ಅರ್ಧ ಗಂಟೆ ಪ್ರಯಾಣಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಿ ಕಲಾವತಿ ಭೂರಿಯಾ ನಿಧನದಿಂದ ತೆರವಾದ ಜೋಬತ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.