ಮರ ಬಿದ್ದು BWSSB ನೌಕರ ಸಾವು

Public TV
1 Min Read

ಬೆಂಗಳೂರು: ಮರ ಬಿದ್ದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯೂಎಸ್‍ಎಸ್‍ಬಿ) ನೌಕರ ಮೃತಪಟ್ಟಿರುವ ಘಟನೆ ಎಂ.ಜಿ ರಸ್ತೆ ಲಿಡೋ ಬಳಿ ನಡೆದಿದೆ.

45 ವರ್ಷದ ಶ್ರೀನಿವಾಸ್ ಮೃತಪಟ್ಟ ನೌಕರ. ಶ್ರೀನಿವಾಸ್ ಲಿಡೋ ಬಳಿ ಇರುವ ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿಯಲ್ಲಿ ನೌಕರನಾಗಿ ಕೆಲಸ ಮಾಡಿಕೊಂಡಿದ್ದರು. ಕಾಲಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಕಳೆದ ಒಂದು ತಿಂಗಳಿಂದ ಮೆಡಿಕಲ್ ಲೀವ್ ನಲ್ಲಿದ್ದರು. ಗ್ಯಾಂಗ್ರಿನ್ ವಾಸಿ ಆಗಿದ್ದರಿಂದ ಶುಕ್ರವಾರದಿಂದ ಕೆಲಸಕ್ಕೆ ಬರುವುದಾಗಿ ಹಿರಿಯ ಅಧಿಕಾರಿಗಳ ಜೊತೆ ಅನುಮತಿ ಪಡೆದುಕೊಳ್ಳುವುದಕ್ಕೆ ತನ್ನ ಕಚೇರಿಗೆ ಪತ್ನಿ ಮಗನೊಂದಿಗೆ ಹೋಗಿದ್ದರು.

ಶ್ರೀನಿವಾಸ್‍ಗೆ ಗ್ಯಾಂಗ್ರಿನ್ ಆಗಿ ಕಾಲು ಕಟ್ ಮಾಡಿದ್ದರಿಂದ ಅವರ ಪತ್ನಿ ಅಧಿಕಾರಿಗಳ ಜೊತೆ ಮಾತನಾಡಿಕೊಂಡು ಬರುವುದಕ್ಕೆ ಕಚೇರಿ ಒಳಗಡೆ ಹೋಗಿದ್ದರು. ಈ ವೇಳೆ ಶ್ರೀನಿವಾಸ್ ತನ್ನ ಮಗನೊಂದಿಗೆ ಕಾರಿನಲ್ಲಿ ಕುಳಿತಿದ್ದರು. ಏಕಾಏಕಿ ಮರ ಬೀಳುತ್ತಿದ್ದಂತೆ ಕಾರಿನಲ್ಲಿದ್ದ ಮಗ ಎಸ್ಕೇಪ್ ಆಗಿದ್ದಾನೆ. ಶ್ರೀನಿವಾಸ್‍ಗೆ ಕಾಲು ಇಲ್ಲದೆ ಇದ್ದುದ್ದರಿಂದ ಓಡುವುದಕ್ಕೆ ಆಗಿಲ್ಲ.

ಹಾಗಾಗಿ ಶ್ರೀನಿವಾಸ್‍ಗೆ ಗಂಭೀರವಾಗಿ ಗಾಯಗಳಾಗಿತ್ತು. ಈ ಘಟನೆ ನಡೆದ ನಂತರ ತಕ್ಷಣ ಸ್ಥಳೀಯರು ಶ್ರೀನಿವಾಸ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಶ್ರೀನಿವಾಸ್ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *