ಚಲಿಸುತ್ತಿದ್ದ ರೈಲಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ

Public TV
1 Min Read

ರಾಮನಗರ: ಭಾರೀ ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಮರವೊಂದು ಮುರಿದು ಬಿದ್ದ ಕಾರಣ 2 ಗಂಟೆಗಳ ಕಾಲ ಚಾಮುಂಡಿ ಎಕ್ಸ್ ಪ್ರೆಸ್ ರೈಲು ಕೆಟ್ಟು ನಿಂತ ಘಟನೆ ರಾಮನಗರ ತಾಲೂಕಿನ ಕೆಂಗಲ್ ಸಮೀಪ ಬಳಿ ನಡೆದಿದೆ.

ರೈಲು ಮಾರ್ಗದ ಪವರ್ ಲೈನ್ ಮೇಲೆ ನೀಲಗಿರಿ ಮರದ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಚಾಮುಂಡಿ ಎಕ್ಸ್ ಪ್ರೆಸ್ ಮೇಲೆ ಸಹ ಕೊಂಬೆ ಬಿದ್ದಿದೆ. ಪರಿಣಾಮ ರೈಲಿನ ಹೆಡ್ ಲೈಟ್ ಒಡೆದು ಹೋಗಿದ್ದು, ರೈಲಿನ ಚಕ್ರಗಳ ನಡುವೆ ಪವರ್ ಲೈನ್ ತುಂಡಾಗಿ ಬಿದ್ದಿದೆ.

ಈ ಕುರಿತು ಮಾಹಿತಿ ಪಡೆದ ರೈಲ್ವೇ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ದುರಸ್ಥಿ ಕಾರ್ಯ ಮಾಡಿದ್ದಾರೆ. ಆದರೆ ದುರಸ್ಥಿ ಕಾರ್ಯ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹೆದ್ದಾರಿಗೆ ನಡೆದು ಬಂದು ಇತರೇ ವಾಹನಗಳ ಮೂಲಕ ಪ್ರಯಾಣ ಮುಂದುವರೆಸಿದರು.

Share This Article
Leave a Comment

Leave a Reply

Your email address will not be published. Required fields are marked *