2 ಸಾವಿರ ಬೇಡ 10 ಸಾವಿರ ಕೊಡಿ – ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ಕಿರಿಕ್‌

Public TV
1 Min Read

ಬೆಂಗಳೂರು: ಬಟ್ಟೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮದ ಸಮಯದಲ್ಲಿ ಮಂಗಳಮುಖಿಯರು (Transgenders) ಬಂದು ಗಲಾಟೆ ಮಾಡಿದ ಘಟನೆ ವಿಜಯನಗರ ಹಂಪಿನಗರದಲ್ಲಿ (Hampinagar) ನಡೆದಿದೆ.

ಬಟ್ಟೆ ಅಂಗಡಿ ಉದ್ಘಾಟನೆ ಮುನ್ನ ಹೋಮ ಹವನ ಆಯೋಜನೆಗೊಂಡಿತ್ತು. ಸರಿಯಾಗಿ ಪೂಜೆ ಸಮಯಕ್ಕೆ ನಾಲ್ವರ ಮಂಗಳಮುಖಿರ ಗುಂಪು ಆಗಮಿಸಿದೆ.

 

ಮಂಗಳಮುಖಿಯರಿಗೆ ಮಾಲೀಕ 2 ಸಾವಿರ ರೂ. ನೀಡಿದ್ದಾರೆ. ಆದರೆ 2 ಸಾವಿರ ರೂ.ಗೆ ಒಪ್ಪದ ಇವರು 10 ಸಾವಿರ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. 10 ಸಾವಿರ ರೂ. ಕೊಡದೇ ಇದ್ದದ್ದಕ್ಕೆ  ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಬಟ್ಟೆ ಅಂಗಡಿ ಮಾಲೀಕ ರಾಘವೇಂದ್ರ ಅವರ ಕುಟುಂಬ ಸದಸ್ಯರಿಗೆ ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಅನ್ಯಮತೀಯ ಯುವಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ – ಸಹಾಯಕ್ಕೆ ಬಂದು ಪ್ರಜ್ಞೆ ತಪ್ಪಿಸಿ ಕೃತ್ಯ

ಈ ಸಂಬಂಧ ವಿಡಿಯೋ ಮಾಡಿ ನೋವು ತೋಡಿಕೊಂಡ ರಾಘವೇಂದ್ರ ಅವರು, ಶುಭ ಕಾರ್ಯ ಬಂದ್ರೆ ಸಾಕು ಮಂಗಳಮುಖಿಯರು ಬರುತ್ತಾರೆ. ಅವರು ಬಂದರು ಅಂತ ನಮಗೆ ತಿಳಿದಷ್ಟು ಹಣ ನೀಡಿದರೆ ಒಪ್ಪುವುದಿಲ್ಲ. ಇಷ್ಟೇ ಕೊಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಹಲ್ಲೆಗೆ ಯತ್ನಿಸಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Share This Article