ಮಹಾರಾಷ್ಟ್ರದಲ್ಲಿ ಲ್ಯಾಂಡ್ ಆಗಬೇಕಿದ್ದ ರೈಲು ನಿಂತಿದ್ದು ಮಧ್ಯಪ್ರದೇಶದಲ್ಲಿ!

Public TV
1 Min Read

ನವದೆಹಲಿ: ಸೋಮವಾರ ಸಂಸತ್ ಭವನದ ಬಳಿ ಕಿಸಾನ್ ಯಾತ್ರೆ ಪ್ರತಿಭಟನೆ ನಡೆಸಲು ಮಹಾರಾಷ್ಟ್ರದ 1500 ಕ್ಕೂ ಹೆಚ್ಚು ರೈತರು ದೆಹಲಿಗೆ ಆಗಮಿಸಿದ್ದರು. ಆದರೆ ಪ್ರತಿಭಟನೆ ಮುಗಿಸಿ ಮರಳಿ ತವರು ರಾಜ್ಯಕ್ಕೆ ಹೊರಟ ರೈತರು ಮಧ್ಯಪ್ರದೇಶದಲ್ಲಿ ಲ್ಯಾಂಡ್ ಆಗಿದ್ದಾರೆ.

ರೈಲ್ವೇ ಇಲಾಖೆಯಲ್ಲಿರುವ ಬೇಜವಾಬ್ದಾರಿ ಸಿಬ್ಬಂದಿಯಿಂದಾಗಿ ಮಹಾರಾಷ್ಟ್ರ ತೆಳಬೇಕಿದ್ದ ಸ್ವಾಭಿಮಾನಿ ಎಕ್ಸ್ ಪ್ರೆಸ್  ರೈಲು ಮಧ್ಯಪ್ರದೇಶ ನಿಲ್ದಾಣ ತಲುಪಿದ ಕತೆಯಿದು.

ಮಂಗಳವಾರ ರಾತ್ರಿ 10 ಗಂಟೆಗೆ ದೆಹಲಿಯಿಂದ ಹೊರಟಿದ್ದ ರೈಲು ರಾತ್ರಿ 2 ಗಂಟೆಗೆ ಮಥುರಾ ತಲುಪಿತ್ತು. ಮಥುರಾದಿಂದ ಮಹಾರಾಷ್ಟ್ರ ತೆರಳಬೇಕಿದ್ದ ರೈಲು 160 ಕಿ.ಮೀ ಸುತ್ತಿ ಮಧ್ಯಪ್ರದೇಶ ಬಾನ್ಮೋರ್ ನಿಲ್ದಾಣಕ್ಕೆ ಬಂದು ತಲುಪಿದೆ.

ರೈಲು ದಾರಿ ತಪ್ಪಿ ಬಾನ್ಮೋರಿಗೆ ಬಂದಿರುವುದನ್ನು ಗಮನಿಸಿದ ರೈಲ್ವೇ ಅಧಿಕಾರಿಗಳು ಬೇರೊಂದು ರೈಲಿನಲ್ಲಿ ರೈತರನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದಾರೆ. ಮಥುರಾದಲ್ಲಿ ತಪ್ಪು ಸಿಗ್ನಲ್ ತೋರಿಸಿದ್ದಕ್ಕೆ ಈ ಎಡವಟ್ಟು ಆಗಿದೆ ಎಂದು ಕೇಂದ್ರದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲಿನಲ್ಲಿ 200 ಮಹಿಳೆಯರು ಸೇರಿದಂತೆ 1494 ಮಂದಿ ರೈತರು ಪ್ರಯಾಣಿಸುತ್ತಿದ್ದರು. ಇವರಿಗೆಲ್ಲ ಕೊಲ್ಲಾಪುರದಿಂದ 39 ಲಕ್ಷ ರೂ. ಪಾವತಿಸಿ ಟಿಕೆಟ್ ಬುಕ್ ಮಾಡಲಾಗಿತ್ತು.

ಮಂಗಳವಾರ ರಾತ್ರಿ 10 ಗಂಟೆಗೆ ನಾವು ದೆಹಲಿಯನ್ನು ಬಿಟ್ಟಿದ್ದೆವು. ಆದರೆ ಬೆಳಗ್ಗೆ 6 ಗಂಟೆಗೆ ನಾವು ಗ್ವಾಲಿಯರ್ ಸಮೀಪದ ಬಾನ್ಮೋರ್ ರೈಲ್ವೆ ನಿಲ್ದಾಣವನ್ನು ತಲುಪಿದ್ದೆವು. ಆಗ್ರಾ ನಂತರ ರಾಜಸ್ಥಾನ ಕೋಟಾದ ಮೂಲಕ ನಾವು ಪ್ರಯಾಣಿಸಿದ್ದೇವೆ. ರೈಲ್ವೇ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನಾವು ಮಧ್ಯಪ್ರದೇಶಕ್ಕೆ ಬಂದಿದ್ದೇವೆ ಎಂದು ಪ್ರಯಾಣಿಕ ಮಹಾವೀರ್ ಪ್ರಸಾದ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

 

https://youtu.be/2VAOXwvxZc8

Share This Article
Leave a Comment

Leave a Reply

Your email address will not be published. Required fields are marked *