ಮದುವೆ ಗಂಡು ಯಾರು ಎಂಬುದು ನಾಳೆ ಗೊತ್ತಾಗಲಿದೆ: ಶಾಸಕ ರಾಮದಾಸ್

Public TV
1 Min Read

ಮೈಸೂರು: ಮೈಸೂರು- ಕೊಡಗು ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಾಳೆ ಗೊತ್ತಾಗಲಿದೆ. ಮದುವೆ ಗಂಡು ಯಾರು ಎಂಬುದು ನಾಳೆ ಗೊತ್ತಾಗಲಿದ್ದು ಮದುವೆ ಗಂಡಿಗೆ ನಾಳೆ ಕಂಕಣ ಕಟ್ತೀವಿ ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಮದಾಸ್ ಅವರು, “ಬಹುತೇಕ ನಾಳೆ ಮದುವೆ ಮನೆ ಗಂಡುಗಳಿಗೆ ಕಂಕಣ ಕಟ್ಟಿ ಬಳಿಕ ಆಯಾ ಕ್ಷೇತ್ರಗಳಿಗೆ ಕರೆದುಕೊಂಡು ಬರುತ್ತೇವೆ. ಯಾರೇ ಬಂದರೂ ಈ ಕ್ಷೇತ್ರವನ್ನು ಗೆಲ್ಲುತ್ತೇವೆ. ಹೊಸ ಗಂಡಾದ್ರು ಸರಿ, ಹಳೆ ಗಂಡಾದ್ರು ಸರಿ” ಎಂದು ಹೇಳಿದರು.

ನಾವು ಕರ್ನಾಟಕದಲ್ಲಿ 28 ಕ್ಷೇತ್ರದಲ್ಲಿ ಗೆಲ್ಲಬೇಕು ಎಂದುಕೊಂಡಿದ್ದೇವೆ. ಮೋದಿ ಮುಖ ನೋಡಿ ಚುನಾವಣೆ ಕೆಲಸ ಮಾಡ್ತೀವಿ. ಲೋಕಸಭಾ ಚುನಾವಣೆಗೆ ಸ್ಥಳೀಯ ನಾಯಕತ್ವದ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ, ನಮಗೆ ಮೋದಿ ಅಷ್ಟೇ ಎಂದರು.

ಹಾಸನ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *