ಇಂದು `ಉಪ್ಪು ಹುಳಿ ಖಾರ’ದ ಜೊತೆ ತೆರೆಗೆ ಬರ್ತಿದ್ದಾನೆ `ಅತಿರಥ’

Public TV
1 Min Read

ಬೆಂಗಳೂರು: ಸ್ಯಾಂಡಲ್‍ ವುಡ್‍ನಲ್ಲಿ ಇಂದು ಎರಡು ಚಿತ್ರಗಳು ಸ್ಪರ್ಧೆಗಿಳಿಯಲಿವೆ. ಮಾಲಾಶ್ರೀ-ಅನುಶ್ರೀ ಅಭಿನಯದ `ಉಪ್ಪು ಹುಳಿ ಖಾರ’ ಒಂದಾಂದ್ರೆ, ಇನ್ನೊಂದು ಚೇತನ್, ಲತಾ ಹೆಗಡೆ ನಟನೆಯ `ಅತಿರಥ’

ಆರಂಭದಿಂದಲೂ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಉಪ್ಪು ಹುಳಿ ಖಾರ. ಆಕರ್ಷಕ ಟೈಟಲ್‍ನ ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ನಿರ್ದೇಶಕರು. ಬಹುತಾರಾಗಣದ ಈ ಚಿತ್ರದಲ್ಲಿ ಅನುಶ್ರೀ, ಜಯಶ್ರೀ, ಶಶಿ, ಶರತ್ ಮುಂತಾದವರು ಅಭಿನಯಿಸಿದ್ದಾರೆ. ನಟಿ ಮಾಲಾಶ್ರೀ ಇವ್ರನ್ನೆಲ್ಲಾ ದಾರಿಗೆ ತರುವ ದೇವಿ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಖಡಕ್ ಡೈಲಾಗ್ ಹೊಡೆದು ಮಾಲಾಶ್ರೀ ಅಭಿಮಾನಿಗಳನ್ನ ರಂಜಿಸಲಿದ್ದಾರೆ.

ರಾಜ್ಯದ 200 ಚಿತ್ರಮಂದಿರಗಳಲ್ಲಿ `ಉಪ್ಪು ಹುಳಿ ಖಾರ’ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿನ ರೋ ರೋ ರೋಮಿಯೋ ಹಾಡು ಈಗಾಗ್ಲೇ ಫೇಮಸ್ ಆಗಿದೆ. ಎಂ ರಮೇಶ್ ನಿರ್ದೇಶನ ಈ ಚಿತ್ರಕ್ಕಿದೆ. `ಉಪ್ಪು ಹುಳಿ ಖಾರ’ದ ರುಚಿಗಳಂತೆ ಮನುಷ್ಯನ ಜೀವನದಲ್ಲಿ ಬರುವ ಅನುಭವವನ್ನ ಅಚ್ಚುಕಟ್ಟಾಗಿ ಹೇಳಲಾಗಿದೆ. ಒಂದು ವಿಭಿನ್ನ ಶೈಲಿಯ ನಿರೂಪಣೆಯ ಈ ಚಿತ್ರ ಭರಪೂರ ಎಂಟರ್ ಟೈನ್ಮೆಂಟ್ ಕೊಡೋಕೆ ಇಂದು ಥಿಯೇಟರ್‍ಗೆ ಬರಲಿದೆ.

`ಉಪ್ಪು ಹುಳಿ ಖಾರ’ ಚಿತ್ರದ ಜೊತೆ ತೆರೆಕಾಣೋಕೆ ಸಿದ್ಧವಾಗಿರೋ ಇನ್ನೊಂದು ಚಿತ್ರವೇ `ಅತಿರಥ’. ಮಹೇಶ್ ಬಾಬು ನಿರ್ದೇಶನದ ಅತಿರಥ ರಾಜ್ಯದಲ್ಲಿ 150ಕ್ಕೂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ಆ ದಿನಗಳು ಚೇತನ್, ಲತಾ ಹೆಗಡೆ ಜೋಡಿಯಾಗಿ ಅಭಿನಯಿಸಿದ್ದಾರೆ.

ಸಾಧು ಕೋಕಿಲಾ ಮಗ ಸುರಾಗ್ ಸಂಗೀತ ನಿರ್ದೇಶನ ಈ ಅತಿರಥ ಚಿತ್ರಕ್ಕಿದೆ. ಚಿತ್ರದಲ್ಲಿ ಚೇತನ್ ಟಿವಿ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸ್ಕೊಂಡಿದ್ದಾರೆ. ತನಿಖೆ-ಅಪರಾಧ ಅಲ್ಲೊಂದು ಲವ್ ಸ್ಟೋರಿಯನ್ನೊಳಗೊಂಡ ಒಂದು ಅಪರೂಪದ ಕಥೆ ಚಿತ್ರದಲ್ಲಿದೆ. ಒಟ್ಟಿನಲ್ಲಿ `ಅತಿರಥ’ ಕೂಡ ಸಿನಿಪ್ರಿಯರಿಗೆ ಭಾರೀ ಭೋಜನ ಕೊಡೋಕೆ ರೆಡಿಯಾಗಿದೆ.

https://www.youtube.com/watch?v=gMX4XWTCvxY

Share This Article
Leave a Comment

Leave a Reply

Your email address will not be published. Required fields are marked *